Author: Kodagu-admin

ಮಡಿಕೇರಿಯಲ್ಲಿ ಭಾನುವಾರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು – ಗೀತಗಾಯನ ಮಡಿಕೇರಿ ನ.20- ಕನ್ನಡದ ಮೊದಲ ನಾಡಗೀತೆ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡಿಗೆ ನೂರು ವಷ೯ಗಳು ತುಂಬಿರುವ ಹಿನ್ನಲೆಯಲ್ಲಿ ಕೊಡಗು ಪತ್ರಕತ೯ರ ಸಂಘದಿಂದ ಪ್ರತಿಷ್ಟಿತ ಮುಳಿಯ ಚಿನ್ನಾಭರಣ ಸಂಸ್ಥೆಯ ಸಹಯೋಗದಲ್ಲಿ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು – ಗೀತಗಾಯನ ಕಾಯ೯ಕ್ರಮವನ್ನು ನವಂಬರ್ 23 ರಂದು ಭಾನುವಾರ ಮಡಿಕೇರಿಯಲ್ಲಿ ಆಯೋಜಿಸಲಾಗಿದೆ. ಎಂದು ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ. ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅನಿಲ್, ನವಂಬರ್ 23 ರಂದು ಭಾನುವಾರ ಸಂಜೆ 5.30 ಗಂಟೆಗೆ ನಗರದ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಆಯೋಜಿತ ಕಾಯ೯ಕ್ರಮಕ್ಕೆ ಮುಳಿಯ ಚಿನ್ನಾಭರಣ ಸಂಸ್ಥೆ ಸಹಯೋಗ ನೀಡಿದ್ದು 3 ಗಂಟೆ ಅವಧಿಯ ಕನ್ನಡ ಗೀತೆಗಳ ಕಾಯ೯ಕ್ರಮದಲ್ಲಿ ಜಿಲ್ಲೆಯ 33 ಗಾಯಕ, ಗಾಯಕಿಯರು ಹಾಡಲಿದ್ದಾರೆ ಎಂದರು. 1924 ರಲ್ಲಿ ಕನ್ನಡದ ಹೆಸರಾಂತ ಕವಿ, ಸಾಹಿತಿ ಹುಯಿಲಗೋಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ…

Read More

ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋಹತ್ಯೆ, ಗೋಮಾಂಸ ಮಾರಾಟ, ಗೋಕಳ್ಳತನ,ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಹಾಕದ ಪೋಲೀಸ್ ಇಲಾಖೆಯ ವಿರುದ್ಧ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ್ ರಂಜನ್ ಗೌಡ ಆಕ್ರೋಶ ಕೊಡಗು ಜಿಲ್ಲೆಯಲ್ಲಿ ನಿತ್ಯ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಗೋಸಾಗಾಟ ,ಗೋಕಳ್ಳತನ, ಗೋಹತ್ಯೆ,ಗೋಮಾಂಸ ಮಾರಾಟ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂ.ಜಾ.ವೇ. ಪೋಲೀಸ್ ಇಲಾಖೆಗೆ ಹಲವು ಭಾರಿ ಮನವಿ ಸಲ್ಲಿಸಿದೆ. ಪೋಲೀಸ್ ಇಲಾಖೆ ಈ ಕಾನೂನುಬಾಹಿರ ಕೃತ್ಯಗಳನ್ನು ಮಟ್ಟಹಾಕಲು ಯಾವುದೇ ವ್ಯವಸ್ಥಿತ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದ ಕಾರಣ ಗೋಹತ್ಯೆ , ಗೋಮಾಂಸ ಮಾರಾಟ, ಗೋಕಳ್ಳತನ,ಅಕ್ರಮ ಗೋಸಾಗಾಟಗಳು ಜಿಲ್ಲೆಯಾದ್ಯಂತ ನಿರಂತರವಾಗಿ ನಡೆಯುತ್ತಲೇ ಇವೆ. ಪೋಲೀಸ್ ಇಲಾಖೆಯಲ್ಲಿ ಗ್ರಾಮ ಬೀಟ್ ವ್ಯವಸ್ಥೆ , ಇಂಟೆಲಿಜೆನ್ಸ್ , ಡಿ.ಸಿ.ಬಿ. ತಂಡ, ಸ್ಪೆಷಲ್ ಬ್ರಾಂಚ್ ,ಸೈಬರ್ ಕ್ರೈಂ, ನೈಟ್ ಬೀಟ್ ,ಓಡಾಟಕ್ಕೆ ವಾಹನಗಳು,ಚೆಕ್ ಪೋಸ್ಟ್ ….ಇತ್ಯಾದಿ ಇತ್ಯಾದಿ ಎಲ್ಲಾ ವ್ಯವಸ್ಥೆಗಳಿದ್ದರೂ ಸಹ ನಿರಂತರವಾಗಿ ನಡೆಯುತ್ತಲೇ ಇರುವ ಈ ಅಪರಾಧ ಕೃತ್ಯಗಳನ್ನು ತಡೆಯಲು ಸಾಧ್ಯವಾಗದೇ ಇರುವುದು ಸಂಶಯಕ್ಕೆ…

Read More

ವಿರಾಜಪೇಟೆ: ಪೀಚೆ ಕತ್ತಿ ಸರಿ ಮಾಡಿಕೊಡುತ್ತೇನೆಂದು ಹೇಳಿ ಮತ್ತು ಹೊಸ ಪೀಚೆಕತ್ತಿಯನ್ನು ಮಾಡಿಕೊಡುತ್ತೇನೆದು ಮುಂಗಡ ಹಣ ಪಡೆದು ಕಳೆದ ಒಂದು ವರ್ಷದಿಂದ ಪೀಚೆ ಕತ್ತಿ ನೀಡದೆ ಗ್ರಾಹಕರಿಗೆ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಪೊನ್ನಂಪೇಟೆ ಬಾಡಗರಕೇರಿ ನಿವಾಸಿ ತಂಬುಕುಟಿರ ಪೂಣಚ ಎಂಬುವವರು ವಿರಾಜಪೇಟೆಯಲ್ಲಿರುವ ತಟ್ಟಂದ ಸುರೇಶ್ ಎಂಬುವವರಿಗೆ ದಿನಾಂಕ 4/10/2024 ರಲ್ಲಿ ಮಗನ ವಿವಾಹ ಸಂದರ್ಭ ಬೇಕಾಗಿರುವುದಕ್ಕಾಗಿ ಹೊಸ ಒಂದು ಕತ್ತಿ ಹಾಗೂ ಮನೆಯಲ್ಲಿದ್ದ ಮತ್ತೊಂದು ಕೊಂಡಿ ಕಳಚಿದ್ದ ಪೀಚೆಕತ್ತಿಯನ್ನು ಸರಿಪಡಿಸಿಕೊಡುವಂತೆ ಸುರೇಶ ಎಂಬಾತನಿಗೆ 32 ಸಾವಿರ ಮುಂಗಡ ಹಣವನ್ನು ನೀಡಿ ಮೂರು ತಿಂಗಳ ಸಮಯಾವಕಾಶ ಪಡೆದು ಬಂದಿರುತ್ತಾರೆ. ಆದರೆ ಮಗನ ಮದುವೆ ಸಮೀಪಿಸಿದರೂ ಆತ ಪೀಚೆ ಕತ್ತಿಯನ್ನು ನೀಡಿರಲಿಲ್ಲ. ಹಲವು ಬಾರಿ ಆತನ ಬಳಿ ಕೇಳಿದರೂ ಆತನಿಂದ ಕತ್ತಿ ಸಿಗದೇ ಮುಂಗಡ ಹಣವೂ ಇಲ್ಲದೆ ಸರಿಪಡಿಸಲು ನೀಡಿದ ಹಳೆ ಕತ್ತಿಯೂ ಸಿಗದಿದ್ದಾಗ 17/1/25 ರಂದು ವಿರಾಜಪೇಟೆ ನಗರ ಠಾಣೆಯಲ್ಲಿ ಪೂಣಚ ಆತನ ವಿರುದ್ಧ ದೂರು ನೀಡಿದ್ದಾರೆ. ಠಾಣೆಗೆ ಬಂದು ಮುಚ್ಚಳಿಕೆ…

Read More

ಕೊಡಗಿನ ಮಾಜಿ ಶಾಸಕರುಗಳನ್ನು ಸತ್ತ ಎಮ್ಮೆಗೆ ಹೋಲಿಸಿ ಅಭಿಪ್ರಾಯ ಹಂಚಿಕೊಂಡ ತೆನ್ನಿರಾ ಮೈನಾ ಅವರ ಮೇಲೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ವಿರಾಜಪೇಟೆ ಮಾಜಿ ಶಾಸಕ ಹಾಗೂ ಮಾಜಿ ಸ್ಪೀಕರ್ ಆಗಿದ್ದು ಕೆ.ಜಿ.ಬೋಪಯ್ಯ ಹಾಗೂ ಮಡಿಕೇರಿಯ ಮಾಜಿ ಶಾಸಕ ಹಾಗೂ ಮಾಜಿ ಸಚಿವ ರಾದ ರಂಜನ್ ಅಪ್ಪಚ್ಚು ಅವರನ್ನು ಕಾಂಗ್ರೆಸ್ ಪಕ್ಷದ ತೆನ್ನಿರ ಮೈನಾ ಎಂಬ ವ್ಯಕ್ತಿಯು ಅವಹೇಳನ ಕಾರಿಯಾಗಿ ಸುದ್ದಿ ಪ್ರಕಟಿಸಿದ್ದಾರೆ. ಇದರಿಂದ ಕೊಡಗಿನ ಬಿಜೆಪಿ ಕಾರ್ಯಕರ್ತರ ಮನಸ್ಸಿಗೆ ತುಂಬಾ ನೋವಾಗಿದೆ.ಅದುದರಿಂದ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಇಂದು ಬಿಜೆಪಿ ಕಾರ್ಯಕರ್ತರು ವಿರಾಜಪೇಟೆ ಗ್ರಾಮಾಂತರ ಠಾಣೆ ಗೆ ಭೇಟಿ ನೀಡಿ ಅಧಿಕಾರ ಗಳಿಗೆ ಪುಕಾರು ನೀಡಿ ವಿಚಾರಣೆ ನಡೆಸುವಂತೆ ಪುಕಾರು ನೀಡಿದರು. ಈ ಹಿಂದೆ ಕೂಡ ಸಾಮಾಜಿಕ ಜಾಲತಾಣದ ಮುಖ್ಯಸ್ಥ ರ ಮೇಲೆ ಆರೋಪ ಹೊರಿಸಿ ಅವರು ಆತ್ಮಹತ್ಯೆ ಗೆ ಕಾರಣರಾಗಿದ್ದರು. ಮತ್ತೆ ಈ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಬಿಜೆಪಿ ಎಸ್ ಮೋರ್ಚದ ವಿರಾಜಪೇಟೆ…

Read More

ಕೊಡಗಿನ ಮಾಜಿ ಶಾಸಕರುಗಳನ್ನು ಸತ್ತ ಎಮ್ಮೆಗೆ ಹೋಲಿಸಿ ಅಭಿಪ್ರಾಯ ಹಂಚಿಕೊಂಡ  ತೆನ್ನಿರಾ ಮೈನಾ ಅವರ ಮೇಲೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ವಿರಾಜಪೇಟೆ ಮಾಜಿ ಶಾಸಕ ಹಾಗೂ ಮಾಜಿ ಸ್ಪೀಕರ್ ಆಗಿದ್ದು ಕೆ.ಜಿ.ಬೋಪಯ್ಯ ಹಾಗೂ ಮಡಿಕೇರಿಯ ಮಾಜಿ ಶಾಸಕ ಹಾಗೂ ಮಾಜಿ ಸಚಿವ ರಾದ ರಂಜನ್ ಅಪ್ಪಚ್ಚು ಅವರನ್ನು ಕಾಂಗ್ರೆಸ್ ಪಕ್ಷದ ತೆನ್ನಿರ ಮೈನಾ ಎಂಬ ವ್ಯಕ್ತಿಯು ಅವಹೇಳನ ಕಾರಿಯಾಗಿ ಸುದ್ದಿ ಪ್ರಕಟಿಸಿದ್ದಾರೆ. ಇದರಿಂದ ಕೊಡಗಿನ ಬಿಜೆಪಿ ಕಾರ್ಯಕರ್ತರ ಮನಸ್ಸಿಗೆ ತುಂಬಾ ನೋವಾಗಿದೆ.ಅದುದರಿಂದ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಇಂದು ಬಿಜೆಪಿ ಕಾರ್ಯಕರ್ತರು ವಿರಾಜಪೇಟೆ ಗ್ರಾಮಾಂತರ ಠಾಣೆ ಗೆ ಭೇಟಿ ನೀಡಿ ಅಧಿಕಾರ ಗಳಿಗೆ ಪುಕಾರು ನೀಡಿ ವಿಚಾರಣೆ ನಡೆಸುವಂತೆ ಪುಕಾರು ನೀಡಿದರು. ಈ ಹಿಂದೆ ಕೂಡ ಸಾಮಾಜಿಕ ಜಾಲತಾಣದ ಮುಖ್ಯಸ್ಥ ರ ಮೇಲೆ ಆರೋಪ ಹೊರಿಸಿ ಅವರು ಆತ್ಮಹತ್ಯೆ ಗೆ ಕಾರಣರಾಗಿದ್ದರು. ಮತ್ತೆ ಈ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಬಿಜೆಪಿ ಎಸ್ ಮೋರ್ಚದ ವಿರಾಜಪೇಟೆ…

Read More

ಇರಿಟ್ಟಿ: ಹದೆಗೆಟ್ಟಿರುವ ಕೂಟುಹೊಳೆ, ಪೆರುಂಬಾಡಿ ನಡುವೆ ಹದೆಗೆಟ್ಟಿರುವ 19 ಕಿಮಿ ರಸ್ತೆಯನ್ನು ಸರಿಪಡಿಸಲು ಕೋರಿ ಕೇರಳ ಇರಿಟ್ಟಿ ಪೆರವೂರ್ ನ ಕಾಂಗ್ರೆಸ್ ಶಾಸಕ ಸನ್ನಿ ಜೋಸೆಪ್ ಅವರು ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದು ಈಗ ಬೆಳಕಿಗೆ ಬಂದಿದೆ. ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಶಾಸಕ ಸನ್ನಿ ಜೋಸೆಫ್, ಹದೆಗೆಟ್ಟ ರಸ್ತೆಯಿಂದ ಕಳೆದ ಆರು ತಿಂಗಳ ಅವಧಿಯಲ್ಲಿ ನಡೆದ ರಸ್ತೆ ಅವಘಡಲ್ಲಿ ಕೇರಳದ ಇಬ್ಬರು ಲಾರಿ ಚಾಲಕರು ಮೃತಪಟ್ಟಿರುವ ಬಗ್ಗೆ ಪತ್ರದಲ್ಲಿ ಉಲ್ಲೇಕಿಸಿದ್ದಾರೆ. ತೀರಾ ಹದೆಗೆಟ್ಟಿರುವ ಪೆರುಂಬಾಡಿಯಿಂದ ಮೂರು ಕಿಮಿ ರಸ್ತೆಯನ್ನು ತಕ್ಷಣ ಡಾಮರೀಕರಣ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಪತ್ರ ಬರೆಯಲಾಗಿದೆ. ಈಗಾಗಲೇ 10.6 ಕಿಮಿ ರಸ್ತೆ ದುರಸ್ತಿಗೆ 17.3 ಕೋಟಿ ಅನುದಾನ ಬಿಡುಗಡೆಗೊಂಡಿದ್ದರೂ ಅದರಲ್ಲಿ ಕೇವಲ 4 ಕಿಮಿ ಮಾತ್ರ ದುರಸ್ತಿ ಮಾಡಲು ಸಾಧ್ಯವಾಗಿದ್ದು, ಹದೆಗೆಟ್ಟ ರಸ್ತೆಯಿಂದಲೇ ಅಪಘಾತವಾಗಿ ಇಬ್ಬರು ಲಾರಿ ಚಾಲಕರು ಮೃತಪಟ್ಟಿರುವ ಬಗ್ಗೆ ಉಲ್ಲೇಕಿಸಿರುವ ಶಾಸಕ ಸನ್ನಿ ಜೋಸೆಫ್, ರಸ್ತೆಯ ಅಗಲೀಕರಣ ಕೇವಲ ವಾಹನ…

Read More

ನಾನು ಗೆದ್ದು ಚುನಾವಣಾ ನಿವೃತ್ತಿ ಪಡೆಯುತ್ತೇನೆ ಹೊರತು ಸೋತಲ್ಲ ಎಂದು ಮಾಜಿ ಸಚಿವ ಎಂಪಿ ಅಪ್ಪಚುರಂಜನ್ ಹೇಳಿದ್ದಾರೆ. *ಕೊಡಗು ಚಾನೆಲ್* ಸಂದರ್ಶನದಲ್ಲಿ ಮಾತನಾಡಿದ ಅವರು 2028ರ ವಿಧಾನಸಭಾ ಚುನಾವಣೆಗೆ ನಾನು ಮತ್ತು ಕೆಜಿ ಬೋಪಯ್ಯ ಇಬ್ಬರೂ ಸ್ಪರ್ಧೆ ಮಾಡುವುದು ಖಚಿತ ಎಂದು ಅವರು ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು. ಅರಣ್ಯ ಸಚಿವರು ನಿಮ್ಮಾನ್ಸ್ ನಿಂದ ಬಂದವರಂತೆ ವರ್ತಿಸುತ್ತಿದ್ದಾರೆ CND ಲ್ಯಾಂಡ್ ಹಾಗು ಆನೆ ಮಾನವ ಸಂಘರ್ಷದ ಬಗ್ಗೆ ಮಾತನಾಡಿದ ಅವರು ರಾಜ್ಯ ಅರಣ್ಯ ಸಚಿವರು ಅಧಿಕಾರಿಗಳ ಮಾತುಗಳನ್ನು ಆಧರಿಸಿ ಹುಚ್ಚರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. CND ಲ್ಯಾಂಡ್ ವಿಚಾರದಲ್ಲಿ ಜಿಲ್ಲೆಯಾದ್ಯಂತ 7000ಕ್ಕೂ ಹೆಚ್ಚು ಕುಟುಂಬಗಳು ಬೀದಿಪಾಲಗಲಿದ್ದು ರಾಜ್ಯ ಸರಕಾರದ ಅವಜ್ಯಾನಿಕ ಸರ್ವೆ ನೀತಿಯೇ ಇದಕ್ಕೆ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ನಿರಂತರ ವನ್ಯಜೀವಿ ಮಾನವ ಸಂಘರ್ಷದಲ್ಲಿ ಕಾರ್ಮಿಕರು ಜೀವ ಕಳೆದುಕೊಳ್ಳುತ್ತಿದ್ದು ಅರಣ್ಯ ಸಚಿವರು ಕೊಡಗು ಜಿಲ್ಲೆಯನ್ನು ಮರೆತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಹೈಕಮಾಂಡ್ ಸೂಚಿಸಿದರೆ ವಿರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧೆ ಬಿಜೆಪಿ ಹೈಕಮಾಂಡ್…

Read More

ಸರ್ಕಾರದಿಂದ ಕಾಫಿ ಬೆಳೆಗೆ ಹೆಚ್ಚಿನ ಉತ್ತೇಜನ ಮತ್ತು ಪ್ರೋತ್ಸಾಹ ವಿಶ್ವ ಮಾರುಕಟ್ಟೆಯಲ್ಲಿ ಕಾಫಿಗೆ ಬಹು ಬೇಡಿಕೆ: ತಳೂರು ಕಿಶೋರ್ ಕುಮಾರ್ ************************************************************* ಮಡಿಕೇರಿ -ಸರ್ಕಾರ ಕಾಫಿ ಬೆಳೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದು, ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಆದ್ದರಿಂದ ಸಂಪಾಜೆ, ಕರಿಕೆ, ಪೆರಾಜೆ, ಚೆಂಬು ಭಾಗದಲ್ಲಿಯೂ ಸಹ ಕಾಫಿ ಬೆಳೆಯುವಂತಾಗಬೇಕು ಎಂದು ಕಾಫಿ ಮಂಡಳಿ ಸದಸ್ಯರಾದ ತಳೂರು ಕಿಶೋರ್ ಕುಮಾರ್ ಅವರು ಸಲಹೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ ಹಾಗೂ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪೆರಾಜೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆದ 72 ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ ಹಾಗೂ ಕಾರ್ಯದಕ್ಷತೆ, ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಡಿಜಿಟಲೀಕರಣವನ್ನು ಪ್ರೋತ್ಸಾಹಿಸುವ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರ್ಕಾರ…

Read More

*KODAGUNEWS* ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ (114) ಇಂದು ಮಧ್ಯಾಹ್ನ 12 ಗಂಟೆಗೆ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಹಲೋಕ ತ್ಯಜಿಸಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ 1911ರ ಜೂನ್ 30ರಂದು ಜನಿಸಿದ ತಿಮ್ಮಕ್ಕ ಅವರು ಚಿಕ್ಕಯ್ಯರನ್ನು ವಿವಾಹವಾಗಿದ್ದರು. ದಂಪತಿಗೆ ಸಂತಾನ ಭಾಗ್ಯ ಲಭಿಸದ ಕಾರಣ, ತಿಮ್ಮಕ್ಕ ಅವರು ಮಕ್ಕಳಿರದ ದುಃಖವನ್ನು ಮರೆಸಿಕೊಳ್ಳಲು ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಸಾಕಿ ಬೆಳೆಸಿದರು. ಈ ಸಸಿಗಳೇ ಅವರಿಗೆ “ಸಾಲುಮರದ ತಿಮ್ಮಕ್ಕ” ಎಂಬ ಖ್ಯಾತಿ ನೀಡಿದ್ದಾರೆ. ಪರಿಸರ ಸಂರಕ್ಷಣೆಯಲ್ಲಿ ನೀಡಿದ ಅಮೂಲ್ಯ ಕೊಡುಗೆಗಾಗಿ 2019ರಲ್ಲಿ ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು.

Read More

ಕುಶಾಲನಗರ: ಜಾಹೀರಾತು ಫಲಕಗಳಲ್ಲಿ ಸರಕಾರದ ಆಡಿಸೂಚನೆಯಂತೆ ಶೇಕಡಾ 60ರಷ್ಟು ಕನ್ನಡ ಬಳಸಬೇಕಿದ್ದ ಜಾಹೀರಾತು ಸಂಸ್ಥೆಗಳು ಸಂಪೂರ್ಣ ಆಂಗ್ಲ ಭಾಷೆಯಲ್ಲೇ ಜಾಹೀರಾತು ಹಾಕಿದ್ದ ಕಾರಣಕ್ಕಾಗಿ ಇಂದು ಕುಶಾಲನಗರದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಸಿ ಬಳಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಹಲವು ಬಾರಿ ಫಲಕಗಳಲ್ಲಿ ಕನ್ನಡ ಪದಗಳನ್ನು ಬಳಸುವಂತೆ ಸೂಚಿಸಿದ್ದರು ಕ್ಯಾರೆ ಅನ್ನದ ಜಾಹೀರಾತು ಫಲಕಗಳಿಗೆ ಮಸಿ ಬಳಿಯುವ ಮೂಲಕ ಬಿಸಿ ಮುಟ್ಟಿಸಿರುವ ಕರವೇ ಕಾರ್ಯಕರ್ತರು ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಎಂಬ ಸಂದೇಶವನ್ನು ಈ ಮೂಲಕ ಸಾರಿದ್ದಾರೆ. ಗಾಂಚಲಿ ಬಿಡಿ ಕನ್ನಡ ಬಳಸಿ ಎಂಬ ಕರವೇ ನಿರ್ಧಾರಕ್ಕೆ ಕುಶಾಲನಗರ ಜನ ಜೈ ಎಂದಿದ್ದಾರೆ.

Read More