
ಕೊಡಗು ಜಿಲ್ಲೆಯಲ್ಲಿ ನಿತ್ಯ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಗೋಸಾಗಾಟ ,ಗೋಕಳ್ಳತನ, ಗೋಹತ್ಯೆ,ಗೋಮಾಂಸ ಮಾರಾಟ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂ.ಜಾ.ವೇ. ಪೋಲೀಸ್ ಇಲಾಖೆಗೆ ಹಲವು ಭಾರಿ ಮನವಿ ಸಲ್ಲಿಸಿದೆ. ಪೋಲೀಸ್ ಇಲಾಖೆ ಈ ಕಾನೂನುಬಾಹಿರ ಕೃತ್ಯಗಳನ್ನು ಮಟ್ಟಹಾಕಲು ಯಾವುದೇ ವ್ಯವಸ್ಥಿತ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದ ಕಾರಣ ಗೋಹತ್ಯೆ , ಗೋಮಾಂಸ ಮಾರಾಟ, ಗೋಕಳ್ಳತನ,ಅಕ್ರಮ ಗೋಸಾಗಾಟಗಳು ಜಿಲ್ಲೆಯಾದ್ಯಂತ ನಿರಂತರವಾಗಿ ನಡೆಯುತ್ತಲೇ ಇವೆ. ಪೋಲೀಸ್ ಇಲಾಖೆಯಲ್ಲಿ ಗ್ರಾಮ ಬೀಟ್ ವ್ಯವಸ್ಥೆ , ಇಂಟೆಲಿಜೆನ್ಸ್ , ಡಿ.ಸಿ.ಬಿ. ತಂಡ, ಸ್ಪೆಷಲ್ ಬ್ರಾಂಚ್ ,ಸೈಬರ್ ಕ್ರೈಂ, ನೈಟ್ ಬೀಟ್ ,ಓಡಾಟಕ್ಕೆ ವಾಹನಗಳು,ಚೆಕ್ ಪೋಸ್ಟ್ ….ಇತ್ಯಾದಿ ಇತ್ಯಾದಿ ಎಲ್ಲಾ ವ್ಯವಸ್ಥೆಗಳಿದ್ದರೂ ಸಹ ನಿರಂತರವಾಗಿ ನಡೆಯುತ್ತಲೇ ಇರುವ ಈ ಅಪರಾಧ ಕೃತ್ಯಗಳನ್ನು ತಡೆಯಲು ಸಾಧ್ಯವಾಗದೇ ಇರುವುದು ಸಂಶಯಕ್ಕೆ ಕಾರಣವಾಗಿದೆ. ಬಹುತೇಕ ಗೋಮಾಂಸ ಮಾರಾಟ, ಅಕ್ರಮ ಗೋಸಾಗಾಟ,ಗೋಕಳ್ಳತನ, ಗೋಹತ್ಯೆ ಪ್ರಕರಣಗಳನ್ನು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಪೋಲೀಸರಿಗೆ ಮಾಹಿತಿ ನೀಡಿ ಬೆನ್ನು ಬಿದ್ದು ಪ್ರಕರಣ ದಾಖಲಿಸುತ್ತಾರೆ. ಹಿಂದುಪರ ಸಂಘಟನೆಗಳ ಗಮನಕ್ಕೆ ಬರುತ್ತಿರುವ ಇಂತಹ ಪ್ರಕರಣಗಳು ಪೋಲೀಸರ ಗಮನಕ್ಕೆ ಬಾರದೇ ಇರುವುದು ಮತ್ತಷ್ಟು ಸಂಶಯಕ್ಕೆ ಕಾರಣವಾಗುತ್ತಿವೆ. ಗೋವುಗಳು ಹಿಂದೂ ಧಾರ್ಮಿಕತೆಯ ಭಾಗವಾಗಿದೆ. ಜೀವನಪರ್ಯಂತ ನಮಗೆ ಹಾಲುಣಿಸುವ ಗೋವನ್ನು ಬಹುಸಂಖ್ಯಾತ ಹಿಂದುಗಳು ತಾಯಿಯ ಸ್ಥಾನದಲ್ಲಿ ಪೂಜಿಸುತ್ತಾರೆ. ಅಂತಹ ಗೋಮಾತೆಯ ಹತ್ಯೆಯನ್ನು ಬಹುಸಂಖ್ಯಾತ ಹಿಂದೂ ಸಮಾಜ ಸಹಿಸುವುದಿಲ್ಲ. ಪುಗಸಟ್ಟೆ ಸಿಗುವ ಹಣದ ಆಸೆಗಾಗಿ ಕೆಲವು ಪಶುವೈದ್ಯರುಗಳು ಅಕ್ರಮ ಗೋಸಾಗಾಟಗಾರರಿಗೆ ಸಹಕರಿಸುತ್ತಿದ್ದು ಅಂತವರನ್ನು ಕೆಲಸದಿಂದಲೇ ವಜಾಗೊಳಿಸಲು ಹೊಸ ಕಾನೂನು ಜಾರಿಯಾಗಬೇಕು. ಅಂತವರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು.ಗೋಹತ್ಯೆ , ಗೋಮಾಂಸ ಮಾರಾಟ,ಗೋಕಳ್ಳತನ, ಅಕ್ರಮ ಗೋಸಾಗಾಟ ಪ್ರಕರಣಗಳನ್ನು ತಡೆಗಟ್ಟುವಲ್ಲಿ ವಿಫಲವಾಗಿರುವ ಇಲಾಖೆಗಳ ವಿರುದ್ಧ ರಾಜ್ಯಪಾಲರು & ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವದು. ಅಂತಿಮವಾಗಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ದಾಖಲಿಸಿ ಅನ್ಯಾಯದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಎಂದು ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ್ ರಂಜನ್ ಗೌಡ ಮಾಹಿತಿ ನೀಡಿರುತ್ತಾರೆ.

