*ಕೊಡಗಿನಲ್ಲಿ ಮುಂದುವರಿದ ಕಾಡನೆ ದಾಳಿ*
*KODAGUNEWS*
*ಸಿದ್ದಾಪುರ ಕರಡಿಗೋಡು ಬಳಿ ಆನೆ ತುಳಿತಕ್ಕೆ ಓರ್ವ ಬಲಿ*…
ಕೊಡಗು ಜಿಲ್ಲೆಯ ಸಿದ್ದಾಪುರ ಬಳಿಯ ಕರಡಿಗೋಡು ಗ್ರಾಮದಲ್ಲಿ ಇಂದು ಸಂಜೆ 6:30 ಗಂಟೆಗೆ ತಮ್ಮ ಮನೆಯ ಸಮೀಪ ತೋಟಕ್ಕೆ ಕೂಕನೂರು ಪುರುಷೋತ್ತಮ್ (72 ) ಎಂಬುವರು ಹೋದ ಸಂದರ್ಭ ಕಾಡಾನೆ ಅವರ ಮೇಲೆ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ ನವರು ಭೇಟಿ ನೀಡಿದ್ದಾರೆ.
ವಲಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಸಿದ್ದಾಪುರ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು, ಸಿದ್ದಪುರ ಕಾಂಗ್ರೆಸ್ ಪಕ್ಷದ ಮುಖಂಡರಾದ ರತೀಶ್, ವಿರಾಜಪೇಟೆ ವಲಯದ ಮುಖಂಡರಾದ ನರೇಂದ್ರ ಕಾಮತ್, ಮತ್ತಿತರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದರೆ.


