ಪ್ರಯಾಣಿಕರಿಂದ ಚಿನ್ನದರೋಡೆ ಯತ್ನ
ಕೊಡಗು ಜಿಲ್ಲೆಯ ಯುವಕ ಸೇರಿ ೧೩ ಮಂದಿ ಬಂಧನ

ವೀರಾಜಪೇಟೆ : ಸಮಾಜ ಘಾತುಕ ಕೃತ್ಯ ಮಾಡುವ ವೇಳೆಯಲ್ಲಿ ಜಿಲ್ಲೆಯ ಯುವಕನೊಂದಿಗೆ ೧೩ ಮಂದಿ ಬಂಧನವಾದ ಘಟನೆ ಕೋಯಿಕೋಡು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ನಡೆದಿದೆ.
ವಿರಾಜಪೇಟೆ ನಗರದ ನೆಹರು ನಗರದ ನಿವಾಸಿ ಕೇಬಲ್ ಕಾರ್ಮಿಕನಾಗಿದ್ದ ಅಭಿ ಅಲೀಯಸ್ ಅಭೀಲಾಶ್ (೩೧) ಸೇರಿದಂತೆ ಕಣ್ಣೂರು ಮತ್ತು ಕೋಯಿಕೋಡ್ ಜಿಲ್ಲೆಯ ೧೦ ಮಂದಿ ಮಲಪುರಂಜಿಲ್ಲೆಯ ೨ ಮಂದಿ ಬಂಧನವಾಗಿದ್ದಾರೆ.
ಬಂಧಿತರಲ್ಲಿ ಕಣ್ಣೂರು ನಿವಾಸಿ ಕೆ.ಪಿ. ಜುನೈದ್ (೨೭), ಕಾಕಯಂಗಾಡ್ ಮುಕ್ಕಕುನ್ನು ನಿವಾಸಿಗಳಾದ ವಿ.ಶರತ್ (೩೫), ಕೆ.ಕೆ. ಕನಕರಾಜ್ (೨೮), ಕೆ.ಕೆ. ಅಕ್ಷಯ್ (೨೬), ಕೆ.ಧನಿಶ್ (೨೯), ತಿಲ್ಲಂಗೇರಿ ಮೂಲದ ಟಿ. ರಂಜಿತ್ (೪೧), ಚಕ್ಕರಕಲ್ಲ್ ನಿವಾಸಿ ತಾಜುದ್ದೀನ್ (೩೨), ವಾರಂ ಮೂಲದ ಶರೊಣ್ (೨೩), ಕೂತುಪರಂಬು ಕೆ.ಸ್ವರಲಾಲ್ (೩೮), ತಿರೂರ್ ಪುದಿಯಕಡಪುರಂ ನಿವಾಸಿ ರೀಯಸ್ (೨೯) ಬೇಪೂರ್ ನಿವಾಸಿ ಪಿ.ಸುಜೀತ್ (೨೬) ಪಿ ವಾಲ್ ಸಂಜೀತ್ (೨೬), ಮತ್ತು ಇರ್ಫಾನ್ ೨೬ ಬಂಧಿತ ಆರೋಪಿಗಳು.
ಸೌದಿ ಆರಬೀಯ ದೇಶದಲ್ಲಿ ಕೆಲಸ ಮಾಡುತ್ತಿರುವ ಕಣ್ಣೂರು ಮೂಲದ ಕೈಪೆಕಂಡಿ ನಿವಾಸಿ ಅನ್ಸಾರ್ ಮತ್ತು ಪರಪ್ಪನಾಂಗಡಿ ಪುತ್ತನ್ಕಡಪ್ಪುರಂ ನ ನಿವಾಸಿ ಆಲಿ ಅಕ್ಬರ್ ಅವರುಗಳ ನಿರ್ದೇಶನದ ಮೇರೆಗೆ ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ತಡೆದು ಚಿನ್ನ ನಗದು ಇತರ ವಸ್ತುಗಳನ್ನು ದರೋಡೆಮಾಡುವ ಸಂಚು ರೂಪಿಸಲಾಗಿತ್ತು. ದರೋಡೆ ಪ್ರಕರಣ, ಕೊಲೆ ಮತ್ತು ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಗಳಾಗಿದ್ದ ಯುವಕರನ್ನು ಗುರುತಿಸಿದ್ದ ಅನ್ಸಾರ್ ಮತ್ತು ಆಲಿ ಆಕ್ಬರ್ಕೊಟೇಶನ್ ತಂಡ ಸುಪಾರಿ ಪಡೆದು ತಾವು ಮಾಡುವ ಕೃತ್ಯಗಳಿಗೆ ಯುವಕರನ್ನು ಸರರಾಜು ಮಾಡುತ್ತಿದ್ದರು.
ಪ್ರಕರಣದ ಪ್ರಮುಖ ರೂವಾರಿಗಳು ತಂಡದ ೧೪ ಮಂದಿಗೆ ರವಿವಾರ ದಿನದಂದುರಾತ್ರಿ ನೈನಿತ್ತಾಲ್ ನಿಂದಕೋಯಿಕೊಡ್ಕರಿಪುರಂ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನದಲ್ಲಿ ಚಿನ್ನ ತರಲಾಗುತ್ತಿದ್ದು ಅದನ್ನು ದರೋಡೆ ಮಾಡುವ ಸಂಚು ರೂಪಿಸಿ ತಂಡದ ೧೩ ಮಂದಿ ಯುವಕರನ್ನು ಗೊತ್ತುಪಡಿಸಿತ್ತು. ಅಂದು ರಾತ್ರಿ ಸುಮಾರು ೯.೩೦ ವಿಮಾನ ನಿಲ್ದಾಣದ ಹೊರ ವಲಯದಲ್ಲಿತಂಡವು ಹೊಂಚು ಹಾಕಿ ಕುಳಿತಿತ್ತು. ಅನುಮಾನಸ್ಪಾದವಾಗಿ ಮಾತನಾಡುತ್ತಿದ್ದ ಯುವಕರನ್ನು ವಿಚಾರಿಸಲು ವಿಮಾನ ನಿಲ್ದಾಣದ ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಯುವಕರು ತದ್ವಿರುದ್ದ ಮಾಹಿತಿಗಳನ್ನು ನೀಡಿದ ಸಂಧರ್ಭ ಅಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಬಂಧನದ ವೇಳೆಯಲ್ಲಿ ಯುವಕರು ಪ್ರಯಾಣಿಕರಿಂದ ಚಿನ್ನದರೋಡೆ ಮಾಡುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ತನಿಖೆ ಸಂಧರ್ಭ ಜೆಡ್ಡಾದಿಂದ ಪ್ರಯಾಣ ಬೆಳಸಿದ್ದ ಎನ್ನಲಾದ ವ್ಯಕ್ತಿಯೋರ್ವ ಕಾಣೆಯಾಗಿದ್ದು ಮೂವರು ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ. ಬಂಧಿತ ಯುವಕರಿಂದ ಕೃತ್ಯಕ್ಕೆ ಬಳಸಿದ್ದ ಮೂರು ಕಾರುಗಳು ಎರಡು ದ್ವೀಚಕ್ರ ವಾಹನಗಳು ಸೇರದಂತೆ ಮೋಬೈಲುಗಳನ್ನು ವಶಕ್ಕೆ ಪಡೆದಿದ್ದಾರೆ.
ಮೋಬೈಲು ದೂರವಾಣಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಾಟ್ಸಅಪ್ ಸಂದೇಶ ಕರೆಗಳನ್ನು ಕಲೆ ಹಾಕಿ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. ಇದೀಗಾ ಬಂದನಕ್ಕೆ ಒಳಗಾಗಿರುವ ಯುವಕರ ತಂಡಕ್ಕೆ ಹಾಗೂ ಚಿನ್ನ ಕಳ್ಳಸಾಗಾಣೆ ಮಾಡುವ ತಂಡಕ್ಕೆ ಸಂಬಂಧ ಇದೆ ಅಥಾವ ಇಲ್ಲ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

