ಕುಟ್ಟದಲ್ಲಿ ಮಚ್ಚಮಾಡ ಕುಟ್ಟಪ್ಪ ಆತ್ಮಹತ್ಯೆ ಪ್ರಕರಣ

ಸಹೋದರಿ ಪುತ್ರ ಕೀಕಣಮಾಡ ಉದಯನಿಂದ ಕಿರುಕುಳ ಆರೋಪದ ಪತ್ರ ಬರೆದಿಟ್ಟು ಆತ್ಮಹತ್ಯೆ

ಕುಟ್ಟದಲ್ಲಿ ಮಚ್ಚಮಾಡ ಕುಟ್ಟಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಪ್ರಕರಣ.

ಮಾರ್ಚ್‌ 17 ರಂದು ತಾವು ಇದ್ದ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಕುಟ್ಟಪ್ಪ.

ಕುಟ್ಟ ಪೊಲೀಸರಿಗೆ ಪುತ್ರ ಹರ್ಷನಿಂದ ಮಾಹಿತಿ. ಬಳಿಕ ಪರಿಶೀಲನೆ ವೇಳೆ ಕುಟ್ಟಪ್ಪ ಅವರ ಜೇಬಿನಲ್ಲಿದ್ದ ಪತ್ರದಲ್ಲಿ ತನ್ನ ಸಹೋದರಿ ಪುತ್ರ ಕೀಕಣಮಾಡ ಉದಯ ಅವರಿಂದ ಕಿರುಕುಳ ಮತ್ತು ಕೊಲೆ ಬೆದರಿಕೆ, ಮತ್ತು ಉದಯ ಅವರ ಮೊಬೈಲ್ ನಂಬರ್ ದಾಖಲಿಸಿ ಈ ನಂಬರ್ ನಿಂದ ಮೆಸೇಜ್ ಪರಿಶೀಲಿಸಲು ಪತ್ರ ಬರೆದಿಟ್ಟು ಆತ್ಮಹತ್ಯೆ.ಪುತ್ರ, ಪುತ್ರನ ಪತ್ನಿ ಯಿಂದ ಯಾವುದೇ ಸಮಸ್ಯೆ ಇಲ್ಲ, ಮೊಮ್ಮಗನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಪತ್ರದಲ್ಲಿ ವಿನಂತಿ ಮಾಡಿದ ಕುಟ್ಟಪ್ಪ

ಈ ಹಿನ್ನಲೆಯಲ್ಲಿ ಕುಟ್ಟಪ್ಪ ಅವರ ಪುತ್ರ ಹರ್ಷ ಮಾ. 19 ರಂದು ನೀಡಿದ ದೂರಿನ ಮೇಲೆ ಕೀಕಣಮಾಡ ಉದಯ ಅವರ ಮೇಲೆ ಪ್ರಕರಣ ದಾಖಲು ಪೊಲೀಸರಿಂದ ಮುಂದುವರಿದ ತನಿಖೆ

ಕೀಕಣಮಾಡ ಉದಯ ಹಲವಾರು ವಾಟ್ಸಾಪ್ ಗ್ರೂಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ ಕಾರ್ಯಕರ್ತ

Exit mobile version