ಎಮ್ಮೆಮಾಡುವಿನ ಬಡ ಕುಟುಂಬಕ್ಕೆ ಜಿಲ್ಲೆಯ ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ ನಿಂದ ಮನೆ ನಿರ್ಮಾಣದ ಶಂಕು ಸ್ಥಾಪನೆ- ಟ್ರಸ್ಟ್ ನ ಮಾನವೀಯ ಕಾರ್ಯಕ್ಕೆ ಜನರಿಂದ ಮೆಚ್ಚುಗೆ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ಸೂರಿಲ್ಲದೆ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಬಡ ಕುಟುಂಬವೊಂದಕ್ಕೆ ಶಾಶ್ವತ ಸೂರಿನ ಭಾಗ್ಯ ಕಲ್ಪಿಸಲು ಮುಂದಾಗಿರುವ ಜಿಲ್ಲೆಯ ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ ನ ಸೇವಾ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ನಾಪೋಕ್ಲು ಬಳಿಯ ಎಮ್ಮೆಮಾಡು ಪಡಿಯಾಣಿ ಗ್ರಾಮದ ಹಾರಿಸ್ ಎಂಬ ವ್ಯಕ್ತಿಯ ಕುಟುಂಬದ ಸಂಕಷ್ಟದ ಪರಿಸ್ಥಿತಿಯನ್ನು ಅರಿತು ಜಿಲ್ಲೆಯಲ್ಲಿ ಹಲವಾರು ಬಡ ಹಾಗೂ ನಿರ್ಗತಿಕರಿಗೆ ನೆರವಾಗುತ್ತಿರುವ ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಕುಟುಂಬಕ್ಕೆ ಶಾಶ್ವತ ಸೂರು ಕಲ್ಪಿಸಲು ಮುಂದಾಗಿದ್ದಾರೆ. ಗುರುವಾರ ಮನೆ ನಿರ್ಮಾಣದ ಶಂಕುಸ್ಥಾಪನೆಗೆ ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಮುಶಾವರ ಸದಸ್ಯರಾದ ಅಬ್ದುಲ್ಲ ಫೈಝಿ ಹಾಗೂ ಎಸ್ ವೈಎಸ್ ರಾಜ್ಯ ಉಪಾಧ್ಯಕ್ಷರಾದ ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ರವವರುಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಎಮ್ಮೆಮಾಡು ಜಮಾಅತ್ ಮಾಜಿ ಕಾರ್ಯದರ್ಶಿ ಬಿ.ಯು.ಅಶ್ರಫ್ ಮಾತನಾಡಿ ಗ್ರಾಮದಲ್ಲಿದ್ದ ಬಡ ಕುಟುಂಬವೊಂದಕ್ಕೆ ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ ಸಂಘಟನೆ ಮನೆ ನಿರ್ಮಿಸಿ ಕೊಡುವ ಮೂಲಕ ಮಾನವೀಯತೆ ತೋರಿರುವುದು ಶ್ಲಾಘನೀಯ. ಸಮಾಜ ಸೇವಾ ಸಂಘಟನೆಗಳು ಸಂಕಷ್ಟದಲ್ಲಿರುವವರಿಗೆ ನೆರವಾದಲ್ಲಿ ಜಿಲ್ಲೆಯ ನಾನಾ ಭಾಗಗಳಲ್ಲಿರುವ ಬಡ ಕುಟುಂಬಗಳಿಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ.ಸೇವಾ ಮನೋಭಾವದಿಂದ ಪ್ರತಿಯೊಬ್ಬರು ಸ್ಪಂದಿಸಿದ್ದಲ್ಲಿ ಅಭಿವೃದ್ಧಿಯೊಂದಿಗೆ ಮುನ್ನಡೆಯಲು ಸಾಧ್ಯವಾಗಲಿದೆ ಎಂದರು.
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹೊದ್ದೂರು ಪಂಚಾಯತ್ ಅಧ್ಯಕ್ಷರಾದ ಎಚ್. ಎ.ಹಂಸ ಕೊಟ್ಟಮುಡಿ ಮಾತನಾಡಿ ಹಲವು ವರ್ಷಗಳಿಂದ ಅನುಗ್ರಹ ಚಾರಿಟೇಬಲ್ ಟ್ರಸ್ಟ್ ಸಂಘಟನೆ ಸಮಾಜ ಸೇವೆಯಲ್ಲಿ ನಿರಂತರ ತೊಡಗಿಸಿಕೊಂಡಿದ್ದು ಅನಾರೋಗ್ಯಕ್ಕೆ ಒಳಗಾದವರು ಹಾಗೂ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ತುರ್ತು ಸಂದರ್ಭದಲ್ಲಿ ನೆರವಾಗುವ ಮೂಲಕ ಸೇವೆ ಮಾಡುತ್ತಿದ್ದು ನನ್ನ ಪಂಚಾಯತ್ ವ್ಯಾಪ್ತಿಯಲ್ಲೇ ಕಾಲೋನಿಯೊಂದಕ್ಕೆ ಬಾವಿ ನಿರ್ಮಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಪಡಿಯಾಣಿ ಗ್ರಾಮದಲ್ಲಿರುವ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿಕೊಡಲು ದಾನಿಗಳ ಸಹಕಾರದಿಂದ ಮುಂದಾಗಿರುವುದು ಶ್ಲಾಘನೀಯ ಎಂದರು.
ಕೊಡಗಿನ ಬಡವರ ಬೆಳಕು ಚಾರಿಟಿಯ ಅಧ್ಯಕ್ಷ ಎಂ.ಎಚ್. ಮೊಹಮ್ಮದ್ ಕುಶಾಲನಗರ ಹಾಗೂ ಸುಗ್ರಿ ಸುಬ್ರಮಣಿ, ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಅಲಿ ಮಾತನಾಡಿ ಬಡವರಿಗೆ ನೇರವಾಗುವ ಟ್ರಸ್ಟ್ ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಈ ಸಂದರ್ಭ ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಫತಾಯಿ ಕಡಂಗ,ಉಪಾಧ್ಯಕ್ಷ ಉಮ್ಮರ್ ಎಡಪಾಲ,ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಮುನೀರ್ ಮಲ್ಳರಿ,ಮೊಯ್ದು ಕುಟ್ಟಿ ಮುಸ್ಲಿಯಾರ್,ವಕ್ಫ್ ಬೋರ್ಡ್ ಸದಸ್ಯ ಹಂಝ,ಕರವಂಡ ಸುರೇಶ್,ಮೊಯಿದಿನ್ ಕಂಬಿಬಾಣೆ,ಮುಸ ಹಾಜಿ ಮಾಪಿಲತೊಡ್,ಪಡಿಯಾಣಿ ಖತೀಬ್ ಹಂಝ ರಹ್ಮನಿ,ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಜಾಕ್ ಸಿ.ಎ.ಚೆಯ್ಯಂಡಾಣೆ,ಕೋಶಾಧಿಕಾರಿ ಅಶ್ರಫ್,ಸೈಪುದ್ದೀನ್ ಚಾಮಿಯಾಲ,ಹಾರಿಸ್ ಕೊಂಡಂಗೇರಿ,ಸಯ್ಯಿದ್ ಅಭಿದ್ ತಂಙಳ್,ಸೈಫುದ್ದಿನ್ ತಂಙಳ್,ಗ್ರಾಮದ ಪ್ರಮುಖರು,
ಸೇರಿದಂತೆ ಮತ್ತಿತರರು ಹಾಜರಿದ್ದರು.
ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ಪ್ರಾರ್ಥಿಸಿ,ಟ್ರಸ್ಟ್ ಕೋಶಾಧಿಕಾರಿ ಅಶ್ರಫ್ ಸ್ವಾಗತಿಸಿ ವಂದಿಸಿದರು.
ಕೊಡಗು ನ್ಯೂಸ್


