ತಹಸೀಲ್ದಾರರಾದ ಪ್ರವೀಣ ಕುಮಾರ್ ಅವರು ಭಾಗಮಂಡಲ ಹೋಬಳಿ ತಾವೂರು ಗ್ರಾಮದ ಕಟ್ಟಪ್ಪಳ್ಳಿ ಎಂಬಲ್ಲಿಗೆ ಭಾಗಮಂಡಲದಿಂದ ನೇರ ರಸ್ತೆ ಸಂಪರ್ಕ ಇಲ್ಲದ ಕಾರಣ ಸಂಪಾಜೆ ಹೋಬಳಿ ಚೆಂಬು ಗ್ರಾಮದ ಮುಖಾಂತರ ತೆರಳಿ ಭೇಟಿ ನೀಡಿ ಬರೆ ಜರಿಯುವ ಹಂತದ ಅಪಾಯಕಾರಿ ಸ್ಥಳದಲ್ಲಿರುವ ಮನೆಗಳನ್ನು ಪರಿಶೀಲಿಸಿದರು ಹಾಗೂ ಅವರಿಗೆ ಮಳೆಯು ತೀವ್ರವಾದಲ್ಲಿ ಸುರಕ್ಷಿತ ಜಾಗಗಳಿಗೆ ತೆರಳುವಂತೆ ಸೂಚಿಸಿದರು ಮತ್ತು ಅಲ್ಲಿನ ಜನಗಳಿಗೆ ಫುಡ್ ಕಿಟ್ ವಿತರಣೆ ಮಾಡಿದರು ಸ್ಥಳದಲ್ಲಿ ಭಾಗಮಂಡಲ ಹೋಬಳಿ ಕಂದಾಯ ಪರಿವೀಕ್ಷಕರು ಗ್ರಾಮ ಆಡಳಿತ ಅಧಿಕಾರಿಗಳು ಗ್ರಾಮ ಸಹಾಯಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.

Exit mobile version