ಕುಂಜಿಲ
ಬಳಿಕ ಕೇಕುಮಾನಿ ಶ್ರೀ ಭಗವತಿ ದೇವಾಲಯಕ್ಕೆ ಭೇಟಿ ನೀಡಿದ ಶಾಸಕರು ಕ್ಷೇತ್ರದ ಅಭಿವೃದ್ಧಿ,ಸುರಕ್ಷತೆ ಹಾಗೂ ಈ ಬಾರಿಯ ಮಳೆಗಾಲವು ಸುಸೂತ್ರವಾಗಿ ಯಾವುದೇ ಹಾನಿ ಉಂಟುಮಾಡದೆ ಜನರ ಬಾಳಿಗೆ ಸುಖ,ಶಾಂತಿಯನ್ನು ನೀಡಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಕಕ್ಕಬ್ಬೆ ವಲಯ ಕಾಂಗ್ರೆಸ್ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಪಂಚಾಯತ್ ಸದಸ್ಯ ಹರೀಶ್ ಮೊಣ್ಣಪ್ಪ,ಪ್ರಮುಖರಾದ ಚೋಯಮಾಡಂಡ ಪೂಣಚ್ಚ,ಅನ್ನಡಿಯಂಡ ದೀಪಕ್,ಚೋಯಮಾಡಂಡ ವಿಜು, ಮುಕ್ಕಾಟಿ ಚಿದಾ, ಮಾರ್ಚಂಡ ಪ್ರವೀಣ್ ಸೇರಿದಂತೆ ಪಕ್ಷದ ಪ್ರಮುಖರು ಗ್ರಾಮಸ್ಥರು,ಮತ್ತಿತರರು ಹಾಜರಿದ್ದರು.


