ಇಸ್ರೋ ಸ್ಪೇಸ್ ಅಪ್ಲಿಕೇಶನ್ ಸೆಂಟರ್ (SAC) ಅಹಮದಾಬಾದ್ಗೆ ಆಯ್ಕೆ

ಗೋಣಿಕೊಪ್ಪದ ಕಾವೇರಿ ಹಿಲ್ಸ್ ಬಡಾವಣೆಯ ನಿವಾಸಿ ಮಾಜಿ ಸೈನಿಕರಾದ ಪಿ.ಎಂ. ಇಬ್ರಾಹಿಂ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಪುರದ ಶಿಕ್ಷಕಿಯಾಗಿರುವ ಶ್ರೀಮತಿ ಕೆ.ಇ. ಸಪೂರ ಅವರ ಪುತ್ರ ಪಿ.ಇ. ಮನ್ಸೂರ್ ಅವರು ಇಸ್ರೋದ ಸ್ಪೇಸ್ ಅಪ್ಲಿಕೇಶನ್ ಸೆಂಟರ್ (SAC), ಅಹಮದಾಬಾದ್ಗೆ ಪ್ರಾಜೆಕ್ಟ್ ಅಸೋಸಿಯೇಟ್ ಆಗಿ ಆಯ್ಕೆಯಾಗಿದ್ದಾರೆ.
ಇವರು ಪ್ರಾಥಮಿಕ ಶಿಕ್ಷಣದಿಂದ ಪಿಯುಸಿ ವರೆಗೆ ಲಯನ್ಸ್ ಶಿಕ್ಷಣ ಸಂಸ್ಥೆ ಗೋಣಿಕೊಪ್ಪಳಿಯಲ್ಲಿ ಶಿಕ್ಷಣ ಪಡೆದಿದ್ದು, ನಂತರ ಅಳ್ವಾಸ್ ಇಂಜಿನಿಯರಿಂಗ್ ಕಾಲೇಜು ಮೂಡಬಿದ್ರೆಯಲ್ಲಿ ಕೃಷಿ ಇಂಜಿನಿಯರಿಂಗ್ ವಿಭಾಗದಲ್ಲಿ 2025ರಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಫರ್ನ್ಸ್ (Foundation for Education and Research in Nature Science and Sustainability) ಎಂಬ ನಾನ್ ಗವರ್ನ್ಮೆಂಟಲ್ ಆರ್ಗನೈಸೇಶನ್ (NGO) ಸಂಸ್ಥೆಯಲ್ಲಿ ಪರಿಸರ ಸಂರಕ್ಷಣೆ ವಿಷಯದಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದಾರೆ.
ಇವರು ಎಸ್.ಎಸ್.ಎಲ್.ಸಿ.ಯಲ್ಲಿ 90.08% ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದು, ಪಿಯುಸಿಯಲ್ಲಿ 85.6% ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಇಂಜಿನಿಯರಿಂಗ್ನಲ್ಲಿ 8.9 ಸಿಜಿಪಿಎ ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿದ್ದಾರೆ.
ಇವರು ಮದರಸಾ ವಿದ್ಯಾಭ್ಯಾಸವನ್ನು ನೂರುಲ್ ಹುದಾ ಮದರಸಾ ಗೋಣಿಕೊಪ್ಪಳಿಯಲ್ಲಿ ಮೊದಲ ತರಗತಿಯಿಂದ ದಶಮ ತರಗತಿ ವರೆಗೆ ಉತ್ತಮ ಶ್ರೇಣಿಯಲ್ಲಿ ಪೂರ್ಣಗೊಳಿಸಿದ್ದಾರೆ. ಕೋವಿಡ್ ಅವಧಿಯಲ್ಲಿ ಪ್ಲಸ್ ಒನ್ ತರಗತಿಯನ್ನು ಮುಗಿಸಿದ್ದಾರೆ.
ಇವರು ಇಂಜಿನಿಯರಿಂಗ್ ಅಧ್ಯಯನದ ವೇಳೆ ಕೃಷಿ ಭೂಸ್ಥಾನಿಕ ತಂತ್ರಜ್ಞಾನ ಮತ್ತು ಪರಿಸರ ಸ್ಥಿರತೆ ಕುರಿತು ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಮಂಡಿಸಿದ್ದಾರೆ. Biennial Lake Conference ನಲ್ಲಿ ಮಂಡಿಸಿದ “Harnessing Geospatial Data to Improve Good Agricultural Practices: A Soil Based Approach” ಎಂಬ ಸಂಶೋಧನಾ ಪ್ರಬಂಧಕ್ಕೆ Sahyadri Young Ecologist – 2024 ಪ್ರಶಸ್ತಿ ದೊರೆತಿದೆ.
2025ರಲ್ಲಿ ನಡೆದ “Global Conference on Smart Horticulture for Prosperity and National Security” ಸಮ್ಮೇಳನದಲ್ಲಿ ಮಂಡಿಸಿದ “Geospatial Intelligence for Arecanut Suitability Mapping: A Remote Sensing and Machine Learning Approach” ಎಂಬ ಸಂಶೋಧನಾ ಪ್ರಬಂಧಕ್ಕೆ Best Research Paper Award ಲಭಿಸಿದೆ. ಇಂಜಿನಿಯರಿಂಗ್ ಅಧ್ಯಯನದ ಅಂತಿಮ ಹಂತದಲ್ಲಿ ಇಸ್ರೋ ಸಂಸ್ಥೆ ಬೆಂಗಳೂರಿನಲ್ಲಿ 5 ತಿಂಗಳ ಇಂಟರ್ನ್ಶಿಪ್ ಮಾಡುವ ಅವಕಾಶ ದೊರಕಿತ್ತು.
ಪ್ರಾಥಮಿಕ ಶಿಕ್ಷಣದಿಂದಲೇ ಶಿಕ್ಷಕರ ಹಾಗೂ ಉಸ್ತಾದರ ಮೆಚ್ಚಿನ ವಿದ್ಯಾರ್ಥಿಯಾಗಿದ್ದ ಇವರು ಚೆಸ್ ಹಾಗೂ ಫುಟ್ಬಾಲ್ ಕ್ರೀಡೆಗಳಲ್ಲಿ ವಿಶ್ವವಿದ್ಯಾಲಯ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಪ್ರಸ್ತುತ ಇಸ್ರೋ ಅಹಮದಾಬಾದ್ನಲ್ಲಿ ನಡೆದ ಪರೀಕ್ಷೆ ಮತ್ತು ಇಂಟರ್ವ್ಯೂದಲ್ಲಿ ಪ್ರಥಮ ಸ್ಥಾನ ಪಡೆದು FASAL 2.0, IPCM ಹಾಗೂ SUFALAM-II ಯೋಜನೆಗಳಿಗೆ ಪ್ರಾಜೆಕ್ಟ್ ಅಸೋಸಿಯೇಟ್ ಆಗಿ ಆಯ್ಕೆಯಾಗಿದ್ದಾರೆ. ಇದರ ಮೂಲಕ ನೂರುಲ್ ಹುದಾ ಮದರಸಾ ಹಾಗೂ ಗೋಣಿಕೊಪ್ಪಳ ಮಹಲ್ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ.
ಇವರ ತಂದೆ ಪಿ.ಎಂ. ಇಬ್ರಾಹಿಂ ಅವರು ಭಾರತೀಯ ಸೇನೆಯ ಕೂರ್ಗ್ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಾಯಿ ಶ್ರೀಮತಿ ಕೆ.ಇ. ಸಪೂರ ಅವರು ದೇವರಪುರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, 2026ರಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಉತ್ತಮ ಸರ್ಕಾರಿ ನೌಕರ ಪ್ರಶಸ್ತಿ ಪಡೆದಿದ್ದಾರೆ.
ಇವರ ಅಕ್ಕ ಪಿ.ಇ. ಮೈಮೂನಾ ಅವರು ಎಂ.ಎಸ್.ಸಿ., ಬಿ.ಎಡ್. (ಭೌತಶಾಸ್ತ್ರ) ಪದವಿಯನ್ನು ಪೂರ್ಣಗೊಳಿಸಿ ಪ್ರಸ್ತುತ ಅನ್ವಾರುಲ್ ಹುದಾ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಿಕ್ಷಕರ ಮಾರ್ಗದರ್ಶನ, ಪೋಷಕರ ಬೆಂಬಲ ಹಾಗೂ ಕಲಿಕೆಯಲ್ಲಿ ಇರುವ ಆಸಕ್ತಿ ಇವನನ್ನು ಇನ್ನಷ್ಟು ಉನ್ನತಿಗೆ
ಎಲ್ಲರ ಹಾರೈಕೆ.

