ನಿವೃತ್ತ ಸರ್ಕಾರಿ ನೌಕರರ ಸಂಘದಿಂದ ಪರಾಕ್ರಮ ದಿನ ಆಚರಣೆ

ಸೋಮವಾರಪೇಟೆ ನಿವೃತ್ತ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಸಮೀಪದ ತೋಳೂರು ಶೆಟ್ಟಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಭಾಷ್ ಚಂದ್ರ ಬೋಸ್ ಜಯಂತಿಯನ್ನು ಪರಾಕ್ರಮ ದಿನ ಹಾಗೂ ಹುತಾತ್ಮರ ದಿನವನ್ನಾಗಿ ಆಚರಿಸಲಾಯಿತು. ಸಂಘದ ಅಧ್ಯಕ್ಷ ಸಿ.ಕೆ. ಮಲ್ಲಪ್ಪ ಅವರು ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಸಾಲ ಅಭಿವೃದ್ಧಿ ಸದಸ್ಯರಾದ ದಿವಂಗತ ಟಿ.ಕೆ. ಸುಬ್ಬಯ್ಯ ರವರಿಗೆ ಸಂತಾಪ ಸೂಚಿಸಲಾಯಿತು.

 

ನಂತರ ಮಾತನಾಡಿ, ಸುಭಾಷ್ ಚಂದ್ರ ಬೋಸ್ ಒಬ್ಬ ದೇಶಪ್ರೇಮಿಯಾಗಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತ ವ್ಯಕ್ತಿಯಾಗಿದ್ದಾರೆ ಎಂದು ಬಣ್ಣಿಸಿದರು. ವಿದ್ಯಾರ್ಥಿಗಳಿಂದ ಭಾಷಣ, ಭಾವಗೀತೆ, ಕೋಲಾಟ, ನೃತ್ಯ, ಚಿತ್ರಕಲೆ ನಡೆಸಿ ಬಹುಮಾನ ವಿತರಿಸಲಾಯಿತು.

 

ಶಾಲಾಭಿವೃದ್ಧಿ ಅಧ್ಯಕ್ಷರಾದ ಟಿ.ಡಿ. ಮೋಹನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಎಸ್.ಜೆ. ವಾರಿಜಮಣಿ ಸ್ವಾಗತಿಸಿ ಶಿಕ್ಷಕರಾದ ಎಸ್.ಎಂ. ರವಿ ಕಾರ್ಯಕ್ರಮ ನಿರೂಪಿಸಿ ಎಲ್ಲರಿಗೂ ವಂದಿಸಿದರು.

 

ದಿನದ ಬಗ್ಗೆ ಎಸ್.ಡಿ.ಯಂ. ನಿರ್ದೇಶಕರಾದ ಟಿ.ಕೆ. ಮಾಚಯ್ಯ ಮಾತನಾಡಿದರು. ಸಿ.ಕೆ. ಮಲ್ಲಪ್ಪ ಬರೆದ ನಾಡ ಹನಿ ಕಥಾಸಂಕಲನ ಪುಸ್ತಕವನ್ನು ಶಾಲೆಯ ಗ್ರಂಥಾಲಯಕ್ಕೆ ನೀಡಿದರು.

 

ಸಂಘದ ವತಿಯಿಂದ ಸುಭಾಷ್ ಚಂದ್ರ ಬೋಸ್ ಭಾವಚಿತ್ರವನ್ನು, ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು, ಹಾಗೂ 2026ರ ಕ್ಯಾಲೆಂಡರ್ ನೀಡಲಾಯಿತು.

 

ಈ ಸಂದರ್ಭ ಸಂಘದ ಗೌರವ ಅಧ್ಯಕ್ಷರಾದ ಹಾಲೇ ಬೇಲೂರು ನಿರ್ವಾಣಿ ಶೆಟ್ಟಿ, ಉಪಾಧ್ಯಕ್ಷರಾದ ಎಚ್.ಜಿ. ಕುಟ್ಟಪ್ಪ, ಕಾರ್ಯದರ್ಶಿ ಬಿ.ಯಂ. ಆನಂದ, ಖಜಾಂಚಿ ಎಸ್.ಆರ್. ಕೆಂಚೇಗೌಡ, ಸಲಹೆ ಗಾರರಾದ ಎಂ.ಎ. ವೀರಪ್ಪ, ನಿರ್ದೇಶಕರಾದ ಟಿ.ಕೆ. ಮಾಚಯ್ಯ, ಸದಸ್ಯರಾದ ಸಿ.ಕೆ. ಶಿವಕುಮಾರ್, ಎ.ಯಂ. ಕೆ.ಎಸ್. ಚಂದ್ರಮ್ಮ ಎ.ಯಂ. ಆನಂದ, ಹಾಗೂ . ಸದಸ್ಯರುಗಳು ಉಪಸ್ಥಿತ ದಿದ್ದರು.

Exit mobile version