ಪೊನ್ನಂಪೇಟೆ ತಾಲೂಕಿನ ಜನರ ಸಮಸ್ಯೆ ಕೇಳುವವರಿಲ್ಲ
ವರ್ಷ ಕಳೆದರೂ ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯಗಿಲ್ಲ ಕರುಡು ನಕ್ಷೆ ಭಾಗ್ಯ

ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಗೊಂಡು ಎರಡು ವರ್ಷ ಕಳೆದರೂ ಕೂಡ, ಕರುಡು ನಕ್ಷೆ ಅನುಮೋದನೆ ಗೊಳ್ಳದೆ, ವಾಸ ವಾಣಿಜ್ಯ ಕೈಗಾರಿಕೆ ಹಾಗೂ ಹಸಿರು ನಿವೇಶನ ವಲಯ ವಿಂಗಡಿಸಿದ ಕರಡು ಪ್ರತಿ ಅನುಮೋದನೆಗೊಳ್ಳದರಿಂದ ಹಾಗೂ ಖಾಯಂ ಸಿಬ್ಬಂದಿಗಳ ಕೊರತೆಯಿಂದ ಯಾವುದೇ ಕಾರ್ಯಗಳು ಸುಗಮವಾಗಿ ನಡೆಯದೆ ಪೊನ್ನಂಪೇಟೆ ವ್ಯಾಪ್ತಿಯ ಜನ ಸಮಸ್ಯೆಯಲ್ಲಿ ಸಿಲುಕಿದ್ದಾರೆ.
ತಾತ್ಕಾಲಿಕವಾಗಿ ವಿರಾಜಪೇಟೆ ಅಥವಾ ಕುಶಾಲನಗರದಿಂದ ವಾರಕ್ಕೆ ಮೂರು ದಿನವಾದರೂ ಇಲ್ಲಿಗೆ, ಅನುಭವಿ ಇಂಜಿನಿಯರ್ ಹಾಗೂ, ಎಫ್ ಡಿ ಸಿ, ಎಸ್ಡಿಸಿಗಳನ್ನು ನೇಮಿಸಿದರೆ ಸ್ವಲ್ಪ ಮಟ್ಟಿಗೆ ಪರಿಹಾರ ಕಾಣಬಹುದಾಗಿದೆ.
ಇಡೀ ಪೊನ್ನಂಪೇಟೆ ಪ್ರದೇಶ ಮಾರ್ಕಿಂಗ್ ಕಾರ್ಯ ನಡೆದು ಕರಡು ಪ್ರತಿ ಅನುಮೋದನೆಗುಳ್ಳದರಿಂದ ಇ. ಸೊತ್ತು ಸರ್ವಾಜನಿಕರಿಗೆ ವಿತರಣೆ ಆಗುತ್ತಿಲ್ಲ. ಇ. ಸೊತ್ತು ಸಮರ್ಪಕವಾಗಿ ವಿತರಣೆಯಾಗದೆ ಸರ್ಕಾರದ ಬೊಕ್ಕಸಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಆದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಯಾಕೆ? ಎಂಬುದು ಅರ್ಥವಾಗದ ಕಗಂಟ್ಟು.
ಸರಕಾರದ ಮಟ್ಟದ ಮೇಲಿನ ಅಧಿಕಾರಿಗಳಿಗೆ ಕೈ ಬಿಸಿ ಮಾಡದೆ ಯಾವುದೇ ಆದೇಶ ಹೊರಬರಲು ಸಾಧ್ಯವಿಲ್ಲ ಆದರೆ ಇಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
202೦ ರಲ್ಲಿ ಘೋಷಣೆಯಾದ ರಾಜ್ಯದ ಇತರ 7 ಪಟ್ಟಣ ಪಂಚಾಯಿತಿಗಳಲ್ಲಿ ಇನ್ನೂ ಕೂಡ ಖಾಯಂ ಸಿಬ್ಬಂದಿಗಳು ನೇಮಕಾತಿಯಾಗದೆ, ಸಂಪೂರ್ಣ ಕಡತ ಗಳು ಸಮರ್ಪಕ ಆಡಳಿತಾತ್ಮ ಕ ವಾಗಿ ಸಮರ್ಪಕ ಗೊಳ್ಳದರಿಂದ ಅಲ್ಲಿಯೂ ಕೂಡ ಇದೇ ರೀತಿಯ ಸಮಸ್ಯೆಗಳು ಉದ್ಬವಗೊಂಡಿದೆ.
ಇದೆ ರೀತಿಯಾದರೆ ಪೊನ್ನoಪೇಟೆ ಪಟ್ಟಣ ಪಂಚಾಯಿತಿ ಕೂಡ ಇನ್ನು 5 ವರ್ಷವಾದರೂ ಕೂಡ ಸಂಪೂರ್ಣವಾಗಿ ಎಲ್ಲಾ ಕೆಲಸ ಕಾರ್ಯಗಳು ಸುಗಮಗೊಳ್ಳುವುದು ಕಷ್ಟ ಸಾಧ್ಯವಾಗಿದೆ.
ಪ್ರಸ್ತುತ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದವರನ್ನು ಬಡ್ತಿ ನೀಡಿ ಪಟ್ಟಣ ಪಂಚಾಯಿತಿ ಸದಸ್ಯರನ್ನಾಗಿ ಮಾಡಿದ್ದಾರೆ ಅಷ್ಟೇ, ಈಗಿರುವ ಸದಸ್ಯರ ಅವಧಿ ಆಗಸ್ಟ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು ನಂತರ ಆಡಳಿತ ಅಧಿಕಾರಿಗಳ ನೇಮಕವಾಗುತ್ತಾರೆ ತದನಂತರ ಒಂದೆರಡು ವರ್ಷಗಳಲ್ಲಿ ಪಟ್ಟಣ ಪಂಚಾಯಿತಿ ಚುನಾವಣೆ ನಡೆದು ಎಲ್ಲಾ ಪ್ರಕ್ರಿಯೆಗಳು ಆರಂಭವಾಗುತ್ತದೆ.
ಶಾಸಕರು ಹೆಚ್ಚು ಆಸಕ್ತಿ ವಹಿಸಿದ್ದರೆ ಆಗಸ್ಟ್ ಕಳೆದ ನಂತರ ಕೂಡಲೆ ಚುನಾವಣೆ ನಡೆಸಬಹುದಾದ ಸಾಧ್ಯತೆ ಹೆಚ್ಚಿವೆ. ಒಟ್ಟಿನಲ್ಲಿ ಚುನಾವಣೆ ನಡೆಯದೆ ಪೂರ್ಣ ಪ್ರಮಾಣದ ಪಟ್ಟಣ ಪಂಚಾಯಿತಿ ಸದಸ್ಯರ ಆಡಳಿತ ಅಸ್ತಿತ್ವಕ್ಕೆ ಬರುವ ತನಕ ಪೊನ್ನಂಪೇಟೆಯ ಜನಸಾಮಾನ್ಯರ ಪರದಾಟ ಯಥಾ ಸ್ಥಿತಿಯಂತಿರುತ್ತದೆ.
ಸದ್ಯದ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಲು ಸದ್ಯಕ್ಕೆ ತಾತ್ಕಾಲಿಕ ನುರಿತ ಆಡಳಿತಾತ್ಮಕ ಸಿಬ್ಬಂದಿಗಳ ನೇಮಕಕ್ಕೆ ಶಾಸಕರು ಹೆಚ್ಚು ಒತ್ತು ನೀಡಬೇಕಾಗಿದೆ.
ಇರುವ ಒಬ್ಬರೇ ಮುಖ್ಯ ಅಧಿಕಾರಿಗೆ ಸಿಬ್ಬಂದಿಗಳ ಕೊರತೆಯಿಂದ ಯಾವುದೇ ರೀತಿಯ ಕೆಲಸ ಕಾರ್ಯಗಳು ಸುಗಮವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ.
ಪ್ರತಿದಿನ ಜನಸಾಮಾನ್ಯರು ತಮ್ಮ ಖಾತೆ ಬದಲಾವಣೆ, ಫರ್ಮ್ ನಂಬರ್ 3 ಇ. ಸೊತ್ತು ಗಾಗಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾಗದ ದಾಖಲಾತಿ ಇಲ್ಲದೆ ಬ್ಯಾಂಕ್ ಸಾಲ, ಮಕ್ಕಳ ವಿದ್ಯಾಭ್ಯಾಸ, ಆಸ್ತಿ ಮಾರಾಟಕ್ಕು ಕೂಡ ಸಾಧ್ಯವಾಗದೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧ್ಯಕ್ಷರು ಹಾಗೂ ಸದಸ್ಯರಿಗೆ ಹೆಚ್ಚಿನ ಅಧಿಕಾರವಿಲ್ಲದೆ ತಮ್ಮ ಅವಧಿ ಮುಕ್ತಾಯ ಗುಳ್ಳುವರೆಗೆ ಪಟ್ಟಣ ಪಂಚಾಯಿತಿ ಸದಸ್ಯರೆಂಬೆ ಹೆಸರಿನ ಅಧಿಕಾರ ಮಾತ್ರ ಇವರು ಅನುಭವಿಸುವಂತಾಗಿದೆ.

