
ಶನಿವಾರಸಂತೆ :-‘ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಕ್ರಮದಿಂದ ವ್ಯಕ್ತಿಯ ಅಂಗಾಲಿನಿAದ ಹೃದಯದ ವರೆಗೂ ರಕ್ತ ಸಂಚಾರ ಮಾಡುವ ಮೂಲಕ ಖಾಯಿಲೆಗಳನ್ನು ದೂರ ಮಾಡುತ್ತದೆ’ ಎಂದು ಕಂಪಾನಿಯೋ ಸಂಸ್ಥೆಯ ಥೆರಪಿಯನ್ ಶಶಿಕಾಂತ್ ಪೂಜಾರಿ ಹೇಳಿದರು. ಅವರು ಕೊಡಗು ಪತ್ರಕರ್ತರ ಸಂಘ ಸೋಮವಾರಪೇಟೆ ತಾಲೋಕು ಘಟಕ ಹಾಗೂ ಕಾಂಪಾನಿಯೋ ಸಂಸ್ಥೆ ಇವರ ವತಿಯಿಂದ ಶನಿವಾರಸಂತೆ ಪತ್ರಿಕಾ ಭವನದಲ್ಲಿ ನಡೆಯುತ್ತಿರುವ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಹಿತಿ ನೀಡುತ್ತಿದ್ದರು.-ಫೂಟ್ ಪಲ್ಸ್ ಥೆರಪಿ ಯಂತ್ರದಲ್ಲಿ ಚಿಕಿತ್ಸೆ ಪಡೆಯುವ ವ್ಯಕ್ತಿಗೆ ಅರ್ಧ ಗಂಟೆಯಲ್ಲಿ ಐದು ಕಿ.ಮೀ.ದೂರದ ವರೆಗೆ ಓಟಕ್ಕೆ ಸಮನಾಗಿರುತ್ತದೆ ಈ ಮೂಲಕ ದೇಹದ ನರ ನಾಡಿಗಳಲ್ಲಿ ರಕ್ತ ಸಂಚಾರವಾಗುತ್ತದೆ ದೇಹದಲ್ಲಿರುವ ಅಶುದ್ದ ರಕ್ತ ಶುದ್ದಗೊಳ್ಳುತ್ತದೆ ಹೃದಯ ಸಂಬAಧಿ ಕಾಯಿಲೆ ಸೇರಿದಂತೆ ಸೊಂಟ ನೋವು, ಹಿಂಬAದಿ ಬೆನ್ನು ನೋವು ಮುಂತಾದ ನರ ದೌರ್ಬಲ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದರು. ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಕ್ರಮವನ್ನು ಭಾರತದಲ್ಲಿ ೨೦೧೪ ರಿಂದ ಸ್ಥಾಪನೆಯಾಗಿದ್ದು ಯಂತ್ರವನ್ನು ಕಾಂಪೋನಿಯಾ ಸಂಸ್ಥೆಯು ತಯಾರಿಸುತ್ತಿದ್ದು ಈ ಮೂಲಕ ಸಂಸ್ಥೆಯು ಸಂಘ-ಸAಸ್ಥೆಗಳ ಸಹಕಾರದಲ್ಲಿ ೧೨ ಲಕ್ಷಕಿಂತ ಹೆಚ್ಚಿನ ಉಚಿತ ಥೆರಪಿ ಶಿಬಿರವನ್ನು ನಡೆಸಿದ್ದು ದೇಶದ್ಯಾದಂತ ೩೮೦ ಸಂಸ್ಥೆಯ ಶಾಖೆಗಳನ್ನು ಹೊಂದಿದೆ ಎಂದರು.
ಕೊಡಗು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ಎಂ.ಮುರುಳಿಧರ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ-ಪ್ರತಿಯೊಬ್ಬರು ಆರೋಗ್ಯದ ಕಡೆಗೆ ಗಮನಕ್ಕೆ ಕೊಡಬೇಕು ಇತ್ತಿಚಿನ ದಿನಗಳಲ್ಲಿ ಚಿಕ್ಕ ವಯಸಿನವರಿಗೂ ಶುಗರ್, ಬಿಪಿ, ಹೃದಯ ಸಂಬAಧಿ ಕಾಯಿಲೆಗಳಿರುತ್ತದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು ಮತ್ತು ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಗ್ರಾ.ಪಂ.ಸದಸ್ಯ ಎಸ್.ಎನ್.ರಘು ಮಾತನಾಡಿ-ದೇಹ ಸದೃಢಗೊಂಡರೆ ಸದೃಢ ಸಮಾಜ ನಿರ್ಮಾಣವಾಗುತ್ತದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಇದರ ಜೊತೆಯಲ್ಲಿ ಪ್ರತಿಯೊಬ್ಬರೂ ಆರೋಗ್ಯ ವಿಮೆ ಮಾಡಿಸಿಕೊಂಡರೆ ಆರೋಗ್ಯ ಸಮಸ್ಯೆ ಬಂದಾಗ ಇದರಿಂದ ಉಪಯೋಗವಾಗುತ್ತದೆ ಎಂದು ಸಲಹೆ ನೀಡಿದರು.
ವರ್ತಕರ ಸಂಘದ ಅಧ್ಯಕ್ಷ ಸರ್ದಾರ್ ಆಹಮದ್ ಮಾತನಾಡಿ-ಪತ್ರಕರ್ತ ಸಂಘವು ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಸಹಕಾರಿಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ತಾಲೋಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್.ಹರೀಶ್ ಕುಮಾರ್ ಅಧ್ಯಕ್ಷತೆವಹಿಸಿ ಮಾತನಾಡಿ-ಶನಿವಾರಸಂತೆ ವ್ಯಾಪ್ತಿಯಲ್ಲಿ ಹಲವು ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳು ನಡೆದಿವೆ ಆದರೆ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರವು ನಡೆದಿರಲಿಲ್ಲ ಈ ಕಾರಣದಿಂದ ನಮ್ಮ ಸಂಘದ ವತಿಯಿಂದ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು
ಕಾರ್ಯಕ್ರಮದಲ್ಲಿ ಮಾಜಿ ಗ್ರಾ.ಪಂ.ಅಧ್ಯಕ್ಷೆ ಸರೋಜ ಶೇಖರ್, ಹಿರಿಯ ಮುಖಂಡ ಕಳಲೆ ಕೃಷ್ಣೇಗೌಡ, ಕಾಂಪೋನಿಯಾ ಸಂಸ್ಥೆಯ ವಸಂತ್, ಮುಂತಾದವರು ಇದ್ದರು.

