ಆಸ್ತಿ ವಿವಾದವೇ ಚೂರಿ ಇರಿತಕ್ಕೆ ಕಾರಣವಾಯಿತೇ….?

ಮಡಿಕೇರಿ ಜೈಲಿನಲ್ಲಿ ಚೂರಿ ಇರಿತಕ್ಕೆ ಒಳಗಾದ ವ್ಯಕ್ತಿ ಮೈಸೂರಿನ ಆಸ್ಪತ್ರೆಯಲ್ಲಿ ಸಾವು….

ಟಿ ಶೆಟ್ಟಿಗೇರಿ ಗ್ರಾಮದ ನಿವಾಸಿ ಹೇಮಂತ್ ತನ್ನ ಬಂಧುವಿನಿಂದಲೇ ಕೊಲೆಯಾದ ವ್ಯಕ್ತಿ

ಕಳೆದ ಎರಡು ದಿನಗಳ ಹಿಂದೆ ಜೈಲಿನಲ್ಲಿ ಚೂರಿ ಇರಿತಕ್ಕೆ ಒಳಗಾದ ಟಿ ಶೆಟಿಗೇರಿ ಗ್ರಾಮದ ನಿವಾಸಿ ಹೇಮಂತ್ (, 26) ಎಂಬಂತ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಕೊನೆಯುಸಿರು

 

ಮೊನ್ನೆ ಜೈಲಿನಲ್ಲಿ ಹೇಮಂತ್ ನಿಗೆ ಚೂರಿ ಇರಿದವನು ಆತನ ಸಂಬಂಧಿ, ಕೊಲೆಯಾದ ಹೇಮಂತನ ತಾತನ ತಂಗಿ ಮಗ ರಾಜೇಶ್ ನೆ ಕೊಲೆ ಮಾಡಿದ ವ್ಯಕ್ತಿಯಾಗಿದ್ದಾನೆ.

 

ಕಳೆದ ಮೂರು ತಿಂಗಳ ಹಿಂದೆ ಜಾಗದ ವಿವಾದ ಏರ್ಪಟ್ಟು ಮನೆಗೆ ಬೆಂಕಿ ಇಟ್ಟ ಪ್ರಕರಣ ಸಂಬಂಧಿಸಿದಂತೆ, ಹಾಗೆ ಜೀಪು ಮೂಲಕ ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ರಾಜೇಶನ ಸಹೋದರ ಗಣೇಶನು ಕೂಡ ಜೈಲು ವಾಸ ಅನುಭವಿಸಿ ಹೊರಬಂದಿದ್ದಾನೆ . ಕಳೆದ ಎರಡು ವರ್ಷಗಳ ಹಿಂದೆ ತನ್ನ ಅತ್ತೆಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶನ ಸಹೋದರ ರಾಜೇಶ್ ( 36) ಜೈಲು ಪಾಲಾಗಿದ್ದನು. ಆತನೇ ಇದೀಗ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

 

ಆತನ ಸಹೋದರ ಗಣೇಶ ಕಳೆದ ಕೆಲವು ದಿನಗಳ ಹಿಂದೆ ಮತ್ತೆ ಜಾಗದ ವಿಚಾರವಾಗಿ ತಗಾದೆ ತೆಗೆದು ಹೇಮಂತನ ಜಾಗಕ್ಕೆ ಪ್ರವೇಶಿಸಿ , ನನ್ನ ಮೇಲೆ ಹೇಮಂತ್, ಆತನ ತಂದೆ ತಾಯಿ ಹಾಗೂ ಹೆಂಡತಿ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿ ಕೊಲೆಗೆ ಯತ್ನ ಮೊಖದಮೆ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡ್ದು ನಾಲ್ವರನ್ನು ಜೈಲಿಗೆ ಕಳುಹಿಸಿದ್ದರು.

ಜೈಲಿನಲ್ಲಿ ಹೇಮಂತನನ್ನು ಹಾಗೂ ಅವರ ಕುಟುಂಬವನ್ನು ಮುಗಿಸಲು ಉಪಾಯ ನಡೆಸಿ, ತನ್ನ ಸಹೋದರ ಮಾಜಿ ಸೈನಿಕ ಗಣೇಶನ ಮೂಲಕ ದೂರು ದಾಖಲಪಡಿಸಿ, ಜೈಲಿನಲ್ಲಿ ಕೊಲೆ ಮಾಡಲು ಯತ್ನಿಸಿ ರಾಜಶೇಖರ್ ದೇಹದ ಎಂಟು ಕಡೆ ಹೇಮಂತ್ ನಿಗೆ ಚೂರಿ ಇರಿದು ಉದ್ದೇಶಪೂರ್ವಕವಾಗಿ ಕೊಲೆ ನಡೆಸಿದ್ದಾನೆ ಎಂದು ಮೃತನ ಕುಟುಂಬಸ್ಥರು ಹೇಳಿದ್ದಾರೆ.

 

ಜಾಗದ ವಿವಾದದಲ್ಲಿ ಪೊಲೀಸರು ಸೂಕ್ತ ರೀತಿಯಲ್ಲಿ ಬಗೆಹರಿಸಲು ಯತ್ನಿಸಿದೆ ಇರುವುದರಿಂದ, ಹಾಗೆ ಒಂದೇ ಕುಟುಂಬದವರು ಪರಸ್ಪರ ದೂರುಗಳನ್ನು ಸಲ್ಲಿಸಿದಾಗ, ಯಾವುದೇ ಅನಾಹುತ ನಡೆಯದಂತೆ ಹೆಚ್ಚಿನ ಕ್ರಮ ಕೈಗೊಳ್ಳದರಿಂದ, ಮತ್ತು ದೂರು ಸ್ವೀಕರಿಸಿದ ಘಟನೆಯ ಸತ್ಯ ಸತ್ಯತೆಯನ್ನು ಪರಿಶೀಲಿಸದೆ ನೇರವಾಗಿ ಮೊಕದಮೆ ದಾಖಲು ಪಡಿಸಿದ ಪರಿಣಾಮ ಇಂದು ಬಾಳಿ ಬದುಕಬೇಕಾದ 26 ವರ್ಷದ ಹರೆಯದ ಯುವಕ ಬಲಿಯಾಗಿದ್ದಾನೆ ಎಂದು ಹೇಳಲಾಗಿದೆ.

 

ಒಂದೇ ಕುಟುಂಬದ ಸದಸ್ಯರ ನಡುವೆ ಪರಸ್ಪರ ಕಳೆದೆರಡು ವರ್ಷಗಳಿಂದ ಜಾಗಕ್ಕೆ ಸಂಬಂಧಿಸಿದಂತೆ, ಹೊಡೆದಾಟ ಕೊಲೆಗೆ ಯತ್ನ ನಡೆಯುತ್ತಲೇ ಬಂದಿದ್ದು ಇದಕ್ಕೊಂದು ಪರಿಹಾರ ದೊರಕದಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

 

ಇದೀಗ ಮೃತಪಟ್ಟ ಹೇಮಂತನ ತಂದೆ, ತಾಯಿ ಮಾವ ಇನ್ನೂ ಜೈಲಿನಲ್ಲಿದ್ದು, ಆತ ನಿನ್ನೆ ರಾತ್ರಿ ಮೃತಪಟ್ಟಿದ್ದು ಇದೀಗ ಮೈಸೂರಿನ ಶವಗಾರದಲ್ಲಿ ಮೃತದೇಹವಿದ್ದು ಟಿ-ಶೆಟ್ಟಿಗೇರಿಗೆ ಇಂದು ಮೃತ ದೇಹ ತಂದು ಅಂತಿಮ ಸಂಸ್ಕಾರ ನೆರವೇರಿಸಲಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Exit mobile version