ಕೊಡಗು ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಅಂಗಾಂಗ ದಾನ ಪ್ರಕ್ರಿಯೆ.
ಡಾಲು ಅವರ ಅಂಗಾಂಗ ದಾನದಿಂದ ಹಲವು ರೋಗಿಗಳಿಗೆ ಅನುಕೂಲ.
ಡಾಲು ಕುಟುಂಬದ ಮಾನವೀಯ ಕಾರ್ಯಕ್ಕೆ ವೈದ್ಯರ ಶ್ಲಾಘನೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಅರವತೋಕ್ಲು ಗ್ರಾಮದ 46 ವರ್ಷದ PG ಡಾಲು
ಅವರ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅವರ ಕುಟುಂಬದವರು ನಿರ್ಧಾರವನ್ನು ತೆಗೆದುಕೊಂಡು ಅಂಗಾಂಗ ದಾನಕ್ಕೆ ಸಹಕರಿಸಿದರು.
ಇದರಿಂದ ಅನೇಕ ರೋಗಿಗಳಿಗೆ ಜೀವದಾನ ದೊರಕಲಿದೆ,
ದಾನಿಯಾದ ವ್ಯಕ್ತಿಯ ಮೂತ್ರಪಿಂಡ ಕಣ್ಣುಗಳು ಹೃದಯ ಕವಾಟಗಳು ಸೇರಿದಂತೆ ವೈದ್ಯಕೀಯ ನಿಯಮಾನುಸಾರ ಮೈಸೂರಿನ ವೈದ್ಯಕೀಯ ತಂಡವು ಅಂಗಾಂಗಗಳನ್ನು ಮರುಪಡೆದುಕೊಂಡರು.
ಈ ಅಂಗಗಳನ್ನು ಮೈಸೂರಿನ ಜೆಎಸ್ಎಸ್ ಮತ್ತು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕೊಂಡೊಯ್ದು
ಅಗತ್ಯವಿರುವ ರೋಗಿಗಳಿಗೆ ಪ್ರತಿರೂಪಣೆ ಮಾಡಲಾಗುವುದು ಎಂದು ಕೊಡಗು ಮೆಡಿಕಲ್ ಕಾಲೇಜು ಡೀನ್ ಡಾ ಲೋಕೇಶ್. ಸರ್ಜನ್ ಡಾ. ಸೋಮಶೇಖರ್ ಮತ್ತು ಡಾ. ನಂಜುಂಡಸ್ವಾಮಿ ಮಾಹಿತಿ ನೀಡಿದ್ದಾರೆ.
ಆರೋಗ್ಯ ಇಲಾಖೆ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ವೈದ್ಯಕೀಯ ತಂಡವು ದಾನಿದಾರರ ಕುಟುಂಬದ ಮಾನವೀಯ ಮನೋಭಾವವನ್ನು ಶ್ಲಾಘಿಸಿದೆ .
ಈ ಪ್ರಕ್ರಿಯೆ ಕೊಡಗು ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮವಾಗಿರುತ್ತದೆ,
ಸಾಮಾನ್ಯ ಜನರು ಸಹ ಅಂಗಾಂಗ ದಾನದ ಬಗ್ಗೆ ಅರಿವು ಪಡೆದು ತಮ್ಮ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ದಾನಕ್ಕೆ ಮುಂದಾಗಬೇಕು
ಇದರಿಂದ ಅನೇಕ ಜೀವಗಳನ್ನು ಉಳಿಸಬಹುದು.



