ನಾನು ವೈಭವ್ ಟಿ ಶೆಟ್ಟಿಗೇರಿ ನಿವಾಸಿ.

ಆತ್ಮೀಯರೇ,
ನಾನು ಈ ಮೂಲಕ ತಿಳಿಯಬಯಸುವುದು ಏನೆಂದರೆ ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹೆಸರಿನಲ್ಲಿ ತಪ್ಪಾದ ಮಾಹಿತಿ ಒಂದು ಹರಿದಾಡುತ್ತಿದೆ. ನನಗೆ ಜಿ ಬಿ ಎಸ್ ಎಂಬ ನರದ ಕಾಯಿಲೆ ಇರುವುದರಿಂದ ನನ್ನ ಹೆಸರಿನಲ್ಲಿ ಕಾಂಗ್ರೆಸ್ ನ ಕಾರ್ಯಕರ್ತರು ಆದಂತ ಮಾನ್ಯ ಶ್ರೀಯುತ ಶಾಸಕ ಪೊನ್ನಣ್ಣರವರ ಆಪ್ತ ಸಹಾಯಕರು ಆದಂತಹ ಸಂಜು ಸುಬ್ಬಯ್ಯ ಹಾಗೂ ರವೀಂದ್ರ ಭಾವೆ ರವರು ನನಗೆ ಉಚಿತ ಚಿಕಿತ್ಸೆಯನ್ನು ನೀಡಿರುವುದಾಗಿ ತಪ್ಪಾದ ಮಾಹಿತಿಯನ್ನು ಫೆಬ್ರವರಿ 2 ರ ಶಕ್ತಿ ದಿನಪತ್ರಿಕೆಯಲ್ಲಿ, ಸ್ಮರಣೀಯರು ಎಂದು ನನ್ನ ಬಾವನಾದ ಶ್ರೀಜೇಶ್ ಅವರ ಹೆಸರಿನಲ್ಲಿ ಮಾಹಿತಿ ಯನ್ನು ಕೊಟ್ಟಿರುತ್ತಾರೆ.
ನನಗೆ ಅಚಾನಕ್ ಎರಡು ಕಾಲುಗಳು ತೀವ್ರವಾದ ನೋವಿನಿಂದ ಬಳಲುತ್ತಿದ್ದ ಸಂದರ್ದದಲ್ಲಿ ನನ್ನ ಅಕ್ಕ ಶಾಲಿನಿ ಹಾಗು ಬಾವರಾದ ಗುರುಪ್ರಸಾದ್ ಹಾಗೂ ಶ್ರೀಜೇಶ್ ರವರು ನನ್ನನ್ನು ಮಡಿಕೇರಿ ಜಿಲ್ಲಾ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಅನೇಕ ಚಿಕಿತ್ಸೆಯ ಬಳಿಕ ಅವರು ಮಂಗಳೂರು ಆಸ್ಪತ್ರೆಗೆ ತೆರಳಲು ಹೇಳಿರುತ್ತಾರೆ. ಮೂರು ದಿನದ ಬಳಿಕ ನಾವು ಮಂಗಳೂರು father muller ಆಸ್ಪತ್ರೆಗೆ ತೆರಳಿ ದಾಖಲಿಸಿ ಅಲ್ಲಿ ಮೂರು ದಿನದ ನಂತರ ಜಿ ಬೀ ಎಸ್ ಸಿಂಡ್ರೋಮ್ ನರದ ಕಾಯಿಲೆ ಇದೆ ಎಂದು ಖಚಿತಪಡಿಸಲಾಯಿತು.ಇದಕ್ಕೆ ಚಿಕಿತ್ಸೆಯಾಗಿ ನನ್ನ 60ಕೆಜಿ ತೂಕದ ಆಧಾರದ ಮೇಲೆ ಹನ್ನೆರೆಡು (12) iminoglobin injection ಅನ್ನು ನೀಡಬೇಕು ಅದಕ್ಕೆ ಒಂದು ಇಂಜೆಕ್ಷನ್ ನಾ ಬೆಲೆ 16000 ಸಾವಿರ 12 ಇಂಜೆಕ್ಷನ್ ಗೆ 192000 ರುಪಾಯಿ ಎಂದು ತಿಳಿಸಿರುತ್ತಾರೆ. ಮತ್ತು ಇದೇ ಕಾಯಿಲೆಗೆ ಮತ್ತೊಂದು ಚಿಕಿತ್ಸೆ ಪ್ಲಾಸ್ಮಾ ಪೆರೋಸಿಸ್ 85000 ಸಾವಿರ ರೂಪಾಯಿಯಲ್ಲಿ ಮುಗಿಯುತ್ತದೆ ಎಂದು ತಿಳಿಸಿರುತ್ತಾರೆ.ಆ ಸಂದರ್ಭದಲ್ಲಿ ನಮ್ಮ ಬಳಿ ಹಣ ಇಲ್ಲದ ಕಾರಣ ನಾವು ಹಾಸ್ಪಿಟಲ್ ಇಂದ ಡಿಸ್ಚಾರ್ಜ್ ಮಾಡಿ ಮನೆಗೆ ತೆರಳಿರುತ್ತೇವೆ.
ನಂತರ ಒಂದು ವಾರದ ಬಳಿಕ ನನ್ನ ಬಾವನಾದ ಶ್ರೀಜೇಶ್ ರವರು ಈ ವಿಷಯವನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗಿರುವ ರವೀಂದ್ರ ಭಾವೆಗೆ ತಿಳಿಸಿ ಮಾನ್ಯ ಶಾಸಕ ಪೊನ್ನಣ್ಣ ರವರ ಆಪ್ತರಾದ ಸಂಜು ಸುಬ್ಬಯ್ಯ ರವರಿಗೆ ತಿಳಿಸಿ ಅವರು ಕೂಡಲೇ ನನ್ನನು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲು ಮಾಡಲು ಹೇಳಿ ಉಚಿತ ಚಿಕಿತ್ಸೆಯನ್ನು ನೀಡುವುದಾಗಿ ಹೇಳಿರುತ್ತಾರೆ.ಆ ಸಂದರ್ಭದಲ್ಲಿ ನನ್ನ ಬಾವಂದಿರು ಹಾಗೂ ನನ್ನ ಸ್ನೇಹಿತ ಮನ್ನಿರ ಸವೀನ್ ನನ್ನನ್ನು ಅಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ
ಅಲ್ಲಿ ತೆರಳಿದ ಸಂದರ್ಭದಲ್ಲಿ ದಾಖಲೆ ಮಾಡಲು 2000 ಸಾವಿರ ಹಣ ಮತ್ತು blood test,ct scan ಎಲ್ಲದಕ್ಕೂ ಹಣ ಪಡೆದಿರುತ್ತಾರೆ.
ದಾಖಲು ಮಾಡಿ ಹಣ ಕಟ್ಟದೆ ಇರುವುದರಿಂದ 3 ದಿನದ ವರಗೆ ಯಾವುದೇ ಚಿಕಿತ್ಸೆಯನ್ನು ನೀಡಿರುವುದಿಲ್ಲ ನಂತರ ನನ್ನ ಅಕ್ಕಂದಿರು, ಬಾವಂದಿರು ಹಾಗೂ ಸ್ನೇಹಿತ, ಅಮ್ಮ ಎಲ್ಲರೂ ಸೇರಿ ಬ್ಯಾಂಕುನಲ್ಲಿ ಸಾಲ ಪಡೆದು,ಚಿನ್ನ ಗಿರವಿ ಇಟ್ಟು ಸಂಬಂಧಿಕರ ಬಳಿ ಸಾಲ ಪಡೆದು ನನಗೆ ಪ್ಲಾಸ್ಮಾ ಪೆರೋಸಿಸ್ ಚಿಕಿತ್ಸೆಯನ್ನು ಕೊಡಿಸುತ್ತಾರೆ.
ಚಿಕಿತ್ಸೆಯು ಮುಗಿದು ಮನೆಗೆ ಬಂದ 40 ದಿನಗಳ ನಂತರ ಜನವರಿ 26 ರಂದು ಗಣರಾಜ್ಯೋತ್ಸವ ದಿನ ಹಾಸ್ಪಿಟಲ್ ನಾ ಖರ್ಚನ್ನು ಕೊಡಿಸುವುದಾಗಿ ನನ್ನನು ಕರೆಸಿ ಮಾನ್ಯ ಶಾಸಕರು ಶ್ರೀಯುತ ಪೊನ್ನಣ್ಣ ರವರಿಗೆ ನನ್ನ ಅಮ್ಮನ ಕೈಯಲ್ಲಿ ಹೂಮಾಲೆ ಹಾಕಿಸಿ ಅಮ್ಮನಿಗೆ 2000 ಸಾವಿರ ರೂಪಾಯಿಗಳನ್ನು ನೀಡಿ, 20 ಲಕ್ಷದ ಚಿಕ್ಸೆಯನ್ನು ಉಚಿತವಾಗಿ ನೀಡಿದ್ದೇವೆ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದುಬಿಟ್ಟಿರುತ್ತಾರೆ.
ಇದರ ಬಗೆ ಪೂರ್ಣ ಮಾಹಿತಿ ಶಾಸಕ ಪೊನ್ನಣ್ಣ ಸರ್ ರವರಿಗೆ ಇರದ ಕಾರಣ ಅವರ ಆಪ್ತ ಸಹಾಯಕರು ಸಂಜು ಸುಬ್ಬಯ್ಯ ಹಾಗೂ ಕಾಂಗ್ರೆಸ್ನ ಕಾರ್ಯಕರ್ತರು ಹಾಗಿರುವ ರವೀಂದ್ರ ಭಾವೆ ಈ ರೀತಿ ಸುಳ್ಳು ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದರಿಂದ ನನ್ನ ಕುಟುಂಬಕ್ಕೆ ತುಂಬ ನೋವು ಉಂಟಾಗಿದೆ ಮತ್ತು ಚಿಕಿತ್ಸೆ ಪೂರ್ಣವಾಗದೇ ಇರುವುದರಿಂದ ಬಡ ಜನರ ಬಗೆ ಈ ರೀತಿಯ ಅಪಪ್ರಚಾರವನ್ನು ಮಾಡದೇ ಇರುವ ರೀತಿ ತಡೆಯಬೇಕಾಗಿ ಕೇಳಿಕೊಳ್ಳುತ್ತೇನೆ..
ಇಂತಿ
ವೈಭವ್ ಹಾಗೂ ಕುಟುಂಬಸ್ಥರು ಹಾಗೂ ಸ್ನೇಹಿತರು.

