ಗೋಣಿಕೊಪ್ಪ-ಪಾಲಿಬೆಟ್ಟ ಮುಖ್ಯ ರಸ್ತೆಯ ಲೋಕಾರ್ಪಣೆಯನ್ನು ಶಾಸಕರಾದ ಎ. ಎಸ್ ಪೊನ್ನಣ್ಣನವರು ನೆರವೇರಿಸಿದರು

ಇತ್ತೀಚೆಗೆ ಪೂರ್ಣಗೊಂಡ ಗುಣಮಟ್ಟದ ಗೋಣಿಕೊಪ್ಪ-ಪಾಲಿಬೆಟ್ಟ ಮುಖ್ಯ ರಸ್ತೆಯ ಉದ್ಘಾಟನೆ ಕಾರ್ಯಕ್ರಮವನ್ನು, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.

₹ 1 ಕೋಟಿ 20 ಲಕ್ಷಗಳ ಅನುದಾನದಲ್ಲಿ ಗೋಣಿಕೊಪ್ಪ ದಿಂದ ಪಾಲಿಬೆಟ್ಟಕ್ಕೆ ತೆರಳುವ ಪ್ರಮುಖ ರಸ್ತೆ ಇದಾಗಿದ್ದು, ದಿನಕ್ಕೆ ಸಾವಿರಾರು ವಾಹನಗಳು ಈ ದಾರಿಯಲ್ಲಿ ಸಂಚರಿಸುತ್ತಿವೆ. ಈ ಬಾರಿಯ ತೀವ್ರ ಮಳೆಯಿಂದಾಗಿ ಹಾನಿ ಗಿಡದ ರಸ್ತೆಯ ದುರಸ್ತಿಗೆ ಶಾಸಕರು ವಿಶೇಷ ಅನುದಾನ ಒದಗಿಸಿದ್ದರು. ಕೊಟ್ಟ ಮಾತಿನಂತೆ, ಮಳೆ ನಿಂತ ಕೂಡಲೇ ಗುಣಮಟ್ಟದ ಕಾಮಗಾರಿಯನ್ನು ನಡೆಸಿ ಸಂಚಾರಕ್ಕೆ ಯೋಗ್ಯವಾದ ಉತ್ತಮ ರಸ್ತೆಯನ್ನು ಇಂದು ಸಾರ್ವಜನಿಕರ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಶಾಸಕರ ಸಹೋದಾರರಾದ ಶ್ರೀ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರು ಶ್ರೀ ಮಿದೇರಿರ ನವೀನ್, ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷರು ಪ್ರಮೋದ್ ಗಣಪತಿ, ಉಪಾಧ್ಯಕ್ಷರು ಮಂಜುಳಾ, ಸದಸ್ಯರು, ಪೊನ್ನಂಪೇಟೆ ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷರು ಟಾಟು ಮೊಣ್ಣಪ್ಪ, ಪಕ್ಷದ ಪ್ರಮುಖರು ಎ ಜೆ ಬಾಬು, ಅಜಿತ್ ಅಯ್ಯಪ್ಪ, ನಾಯಂದಿರ ಶಿವಾಜಿ, ಪೊನ್ನು ಅಜ್ಜಿಕುಟ್ಟಿರ, ರೋಷನ್, ಧ್ಯಾನ್, ಧನ್ಯ, ಅಂಕಿತ್, ಆದಿತ್ಯ ಪೆಮ್ಮಯ್ಯ,ಆಫ್ಜಲ್, ಕಲಿದ್, ಲತೀಫ್, ಶಾಫಿ ಎಡಪಾಲ, ವಿನೋದ್, ವಾಜೀದ್ ಹಾಗೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

ಕೊಡಗು ನ್ಯೂಸ್

Exit mobile version