ವೆನಿಜಾವೆಲಾದಲ್ಲಿ ನಡೆಯುತ್ತಿರುವ ಅಟ್ಟಹಾಸ ವನ್ನು ಖಂಡಿಸಿ ನೆಲ್ಲಿಹುದಿಕೇರಿ ಸಿಪಿಐ ಎಂ ಶಾಖಾ ವತಿಯಿಂದ ಪ್ರತಿಭಟನೆ

ವೆನಿಜವೆಲಾ ಅಧ್ಯಕ್ಷರಾದ ವಡೂರ ಮತ್ತು ಅವರ ಪತ್ನಿಯನ್ನು ಕಿಡ್ನಾಪ್ ಮಾಡಿರುವ ಕ್ರಮವನ್ನು ವಿರೋಧಿಸಿ, ಪ್ರಜಾಪ್ರಭುತ್ವ ರಾಷ್ಟ್ರವನ್ನು ಕಗ್ಗೊಲೆ ಮಾಡುತ್ತಿರುವ ಮತ್ತು ಡೊನಾಲ್ಡ್ ಟ್ರಂಪ್ ಅವರ ಗೂಂಡಾಗಿರಿಯನ್ನು ಖಂಡಿಸಿ, ಅಮೆರಿಕದ ಸಾಮ್ರಾಜ್ಯ ಶಾಹಿ ನೀತಿಯನ್ನು ವಿರೋಧಿಸಿ
ನೆಲ್ಲಿಹುದಿಕೇರಿ ಸಿಪಿಐಎಂ ಶಾಖಾವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆಯಲ್ಲಿ ಕೊಡಗು ಜಿಲ್ಲಾ ಸಿ ಪಿ ಐ (ಎಂ) ಕಾರ್ಯದರ್ಶಿಯಾದ ಎಚ್. ಬಿ .ರಮೇಶ್ ಭಾಗವಹಿಸಿದ್ದರು ಮತ್ತು ನೇಲ್ಲಿಹುದಿಕೇರಿ ಶಾಖಾ ಕಾರ್ಯದರ್ಶಿಯಾದ ಪಿಆರ್ ಭರತ್, ಹಾಗೂ ಟಿ .ಟಿ. ಉದಯಕುಮಾರ್, ಶೌಖತ್ ಅಲಿ, ಚಂದ್ರ ,ಯೂಸಫ್ ,ನಾರಾಯಣ ,ಶಂಸುದ್ದೀನ್, ಶಿವರಾಮ, ಎಂ.ಜಿ. ಜೋಸ್, ರವಿ,ಮತ್ತು ಪಕ್ಷದ ಕಾರ್ಯಕರ್ತರು ಹಿತೈಷಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕೊಡಗು ನ್ಯೂಸ್

