ತಡರಾತ್ರಿ ಸಾರ್ವಜನಿಕ ಸ್ಥಳದಲ್ಲಿ ಬಂದೂಕು ಪ್ರದರ್ಶನ ಆರೋಪಿಗಳು ಅಂದರ್
ವಿರಾಜಪೇಟೆಯ ಮೂರ್ನಾಡು ಜಂಕ್ಷನ್ ಬಳಿ ಘಟನೆ
ಜನವರಿ 2ರಂದು ವಿರಾಜಪೇಟೆಯ ಮೂರ್ನಾಡು ಜಂಕ್ಷನ್ ಬಳಿ ರಾತ್ರಿ 11:45 ಸಮಯದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬಂಧೂಕನ್ನು ಪ್ರದರ್ಶನ ಮಾಡಿದ ಮೂವರನ್ನು ಕೋವಿ ಸಹಿತ ವಿರಾಜಪೇಟೆ ನಗರ ಪೊಲೀಸರು ವಶಪಡಿಸಿಕೊಂಡು ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಹೆಡ್ ಕಾನ್ಸ್ಟೇಬಲ್ ಅಕ್ಷಯ್ ರವರು ವಿರಾಜಪೇಟೆ ನಗರದಲ್ಲಿ ರಾತ್ರಿ ಗಸ್ತು ತಿರುಗಾಡುತ್ತಿದ್ದ ಸಮಯ 11:45 ಗಂಟೆಗೆ ವೇಳೆಯಲ್ಲಿ ಅಕ್ಷಯ್ ರವರಿಗೆ ಬಾತ್ಮಿದಾರರು ಕರೆ ಮಾಡಿ ಮುರ್ನಾಡ್ ಜಂಕ್ಷನ್ ನಲ್ಲಿ K A 12 C 1331 ಆಟೋ ರಿಕ್ಷಾದಲ್ಲಿ ಇಬ್ಬರು ವ್ಯಕ್ತಿಗಳು ಬಂಧೂಕನ್ನು ಹೊರಗೆ ಕಾಣುವಂತೆ ಹಿಡಿದುಕೊಂಡು ಕುಳಿತುಕೊಂಡಿರುವುದಾಗಿ ತಿಳಿಸಿದ ಮೇರೆಗೆ ಸ್ಥಳಕ್ಕೆ ಧಾವಿಸಿದ ಅಕ್ಷಯ್ ಮೂರ್ನಾಡು ಜಂಕ್ಷನ್ ಗೆ ಹೋಗಿ ನೋಡಿದಾಗ ಬಾರ್ ಮುಂಭಾಗದಲ್ಲಿ ಆಟೋರಿಕ್ಷಾ ಒಂದು ನಿಲ್ಲಿಸಿಕೊಂಡಿದ್ದು ಆಟೋರಿಕ್ಷಾದಲ್ಲಿ ಇಬ್ಬರು ವ್ಯಕ್ತಿಗಳು ಬಂದೂಕಿನೊಂದಿಗೆ ಕುಳಿತ್ತಿದ್ದರು. ನಂತರ ಇಬ್ಬರನ್ನು ವಶಕ್ಕೆ ಪಡೆದು ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 1/2023 ಕಲಂ 270 ಬಿಎನ್ಎಸ್ 2026 ಮತ್ತು ಕಲಂ 3,25, 27, ಇಂಡಿಯನ್ ಆರ್ಮ್ಸ್ ರೀತಿ ಪ್ರಕರಣ ದಾಖಲಾಗಿರುತ್ತದೆ.
ಯೋಗೀಶ್ ಎ.ಆರ್ ತಂದೆ ಲೇಟ್ ರುದ್ರಪ್ಪ ಪ್ರಾಯ 23 ವರ್ಷ ವಾಸ ಬಾಳೆಗುಂಡು ಕೆರೆತಟ್ಟು ಪೈಸಾರಿ ಮರಂದೋಡ ಗ್ರಾಮ, ಜಯ ಪಿ.ಎಂ ತಂದೆ ಮುತ್ತಪ್ಪನ್ ಪ್ರಾಯ 38 ವರ್ಷ ಆಟೋ ಡ್ರೈವರ್ ವಾಸ ಕಕ್ಕಟ್ಟೆ ನಾಪೋಕ್ಲು ಹೋಬಳಿ, ಮಡಿಕೇರಿ ತಾಲೂಕು
ಸೋಮಣ್ಣ ಎಮ್ ತಂದೆ ಮಂದಣ್ಣ ಪ್ರಾಯ 33 ವರ್ಷ ವಾಸ ಕೊಳಕೇರಿ ಗ್ರಾಮ ನಾಪೋಕ್ಲು ಹೋಬಳಿ
ಆರೋಪಿಗಳು ಕುಡಿದ ಅಮಲಿನಲ್ಲಿ ಒಂಟಿ ನಳಿಕೆಯನ್ನು ಆಟೋರಿಕ್ಷದಲ್ಲಿ ಇಟ್ಟುಕೊಂಡು ಓಡಾಡುತ್ತಿರುವುದು ಕಂಡು ಬಂದ ಹಿನ್ನೆಲೆ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಬಂದೂಕನ್ನು ತೆಗೆದುಕೊಂಡು ರಾತ್ರಿ ಸಮಯದಲ್ಲೇ ಆಟೋರಿಕ್ಷದಲ್ಲಿ ಸುತ್ತಾಡುತ್ತಿದ್ದ ಉದ್ದೇಶವನ್ನು ಪೊಲೀಸರು ತನಿಖೆ ನಡೆಸಿ ತಿಳಿಯಬೇಕಾಗಿದೆ.

