ಮತ್ತೆ ಅದೇ ವ್ಯಾಪ್ತಿಗೆ ಹಿಂದಿರುಗಿದ ಕಾಡಾನೆ ಹಿಂಡು ವ್ಯರ್ಥವಾದ ಕಾರ್ಯಚರಣೆ
ಸಿದ್ದಾಪುರ : ಇಂದು ಬೆಳ್ಳಗ್ಗೆಯಿಂದ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಕಾಡಾನೆಗಳನ್ನು ಅರಣ್ಯಕಟ್ಟುವ ಕಾರ್ಯಾಚರಣೆ ವೇಳೆ ಕಾಡಾನೆಗಳು ಇಲಾಖೆ ಸಿಬ್ಬಂದಿಗಳ ಮೇಲೆಯೇ ದಾಳಿಗೆ ಮುಂದಾಗಿದ್ದ ಪ್ರಸಂಗ ಕೂಡ ನಡೆದಿದೆ. ಪಳ್ಳಕೆರೆ ವ್ಯಾಪ್ತಿಯಿಂದ ಗುಹ್ಯ ಶಾಲೆ ವರೆಗೂ ತಲುಪಿದ್ದ ಕಾಡಾನೆ ಹಿಂಡು ಕತ್ತಲಾಗುತ್ತಿದ್ದಂತೆ ಮತ್ತದೇ ವ್ಯಾಪ್ತಿಗೆ ಹಿಂದಿರುಗಿದ್ದು ಗುಹ್ಯ ದೇವಾಲಯ ಸಮೀಪದ ದೇವರಕಾಡುವಿನಲ್ಲಿ ಬೀಡುಬಿಟ್ಟಿವೆ ಎನ್ನಲಾಗಿದೆ.
ಆದುದ್ದರಿಂದ ಗುಹ್ಯ, ಪಳ್ಳಕೆರೆ, ಕಕ್ಕಟಕಾಡು ಸುತ್ತಮುತ್ತಲ ಪ್ರದೇಶದ ಜನ ಎಚ್ಚರಿಕೆಯಿಂದ ಇರುವಂತೆ ಇಲಾಖೆ ಮನವಿ ಮಾಡಿದ್ದು , ನಾಳೆ ಕಾರ್ಯಾಚರಣೆ ಮುಂದುವರೆಸುವುದೆಂದು ಮಾಹಿತಿ ನೀಡಲಾಗಿದೆ.



